ಕೊಳ್ಳೇಗಾಲ: ಜ.20ರಂದು ಪರಿವರ್ತನಾ ರ್ಯಾಲಿ
ಕೊಳ್ಳೇಗಾಲ,ಜ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ ಹಾಗೂ ಕೇಂದ್ರ ರಸ್ತೆ ಅಭಿವೃದ್ಧಿ(ಸಿ.ಆರ್.ಎಫ್) ರಾಜ್ಯ ಸರ್ಕಾರದ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ನಾಚಿಕೆ ಗೇಡಿನ ವಿಚಾರವಾಗಿದೆ ಎಂದು ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ ಟೀಕಿಸಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಕರೆದಿದ್ದ ಪತಿಕಾಗೋಷ್ಟಿಯನ್ನುದ್ದೇಶಿ ಮಾತನಾಡಿದ ಅವರು, ರಾಜ್ಯ ಅನ್ನಭಾಗ್ಯ ಕಾರ್ಯಕ್ರಮಕ್ಕೆ ಕೇಂದ್ರ ಸಕಾರ ಕೆ.ಜಿಗೆ 33 ರೂ ಸಬ್ಸಿಡಿ ನೀಡುತ್ತಿದೆ. ರಾಜ್ಯ ಸರ್ಕಾರ ಕೇವಲ 3 ರೂ ಮಾತ್ರ ಖರ್ಚು ಮಾಡುತ್ತಿದೆ. ಹೀಗಾಗಿ ಈ ಯೋಜನೆಯ ಪ್ರತಿಫಲ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಸಂಸದ ಧೃವನಾರಾಯಣ್ರವರು ಸಹಾ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗೆ ನೀಡಿರುವ ನೂರಾರು ಕೋಟಿ ಹಣ ತನ್ನಿಂದಲೇ ಬಂದಿದೆ ಎಂದು ಬಿಂಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಇದು ಕೇಂದ್ರ ಸರ್ಕಾರ ಕೊಡುಗೆ.ರಾಜ್ಯ ಸರ್ಕಾರದ ಕೊಡುಗೆ ಏನು ಇಲ್ಲ ಎಂದು ಹೇಳಿದರು. ಧೃವನಾರಾಯಣ ಪ್ರಚಾರ ಪ್ರಿಯರಾಗಿದ್ದು ಪತ್ರಿಕೆಗಳಲ್ಲಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಬಸ್ ನಿಲ್ದಾಣ ನಾನಿದ್ದಾಗಲೇ 8 ಕೋಟಿ ಮಂಜೂರಾಗಿದ್ದು. ಈಗ ಅಡಿಗಲ್ಲು ಭಾಗ್ಯ ಒದಗಿದೆ. ಕುಡಿಯುವ ನೀರು ಯೋಜನೆ ಸಹ ನನ್ನ ಅವಧಿಯಲ್ಲಿ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಯ ಗಣ್ಯರ ಕೊಠಡಿ ಸಹ ನಾನು ಶಾಸಕನಾಗಿದ್ದಾಗಲೇ ಮಂಜೂರು ಮಾಡಿಸಿದೆ. ಹಾಗಾಗಿ ಕಾಂಗ್ರೇಸ್ ಸರ್ಕಾರದ ಕೊಡುಗೆ ಏನು ಇಲ್ಲ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಜ.20ರಂದು ಹನೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಪರಿವರ್ತನಾ ರ್ಯಾಲಿ ನಡೆಸಿ, ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲ ಎಂ.ಜಿ.ಎಸ್.ವಿ ಮೈದಾನದಲ್ಲಿ ಏರ್ಪಡಿಸಿರುವ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇವರ ಜೊತೆಗ ಈಶ್ವರಪ್ಪ, ಶೋಭಾ ಕರಂದ್ಲಾಜೆ, ಸಂಸದ ಪ್ರತಾಪ ಸಿಂಹ ಸೇರಿದಂತೆ ರಾಜ್ಯದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಸರ್ವೇಶ್ಬಸವಯ್ಯ, ಮುಖಂಡರುಗಳಾಧ ಶ್ರೀಧರ್ಮೂರ್ತಿ, ಮಾಂಬಳ್ಳಿ ನಂಜುಡಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಬಾಗಳಿ ಮಲ್ಲೇಶ್, ಟೌನ್ ಬಿಜೆಪಿ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯಧರ್ಶಿ ಜಿ.ಪಿ ಶಿವಕುಮಾರ್, ಸುರೇಶ್, ಜಿಪಂ ಸದಸ್ಯ ಕಮಲ್, ನಗರಸಭೆ ಸದಸ್ಯರಾದ ಗಿರೀಶ್, ಸುಮಾಸುಬ್ಬಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.