ಚಿಕ್ಕಮಗಳೂರು; ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ :ಜಿಲ್ಲಾಧಿಕಾರಿ ಶ್ರೀರಂಗಯ್ಯ
ಚಿಕ್ಕಮಗಳೂರು, ಜ.31: ಮುಂಬರುವ ವಿಧಾನಸಭಾ ಚುನಾವಣೆ ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ದತೆಯನ್ನು ಕೈಕೊಂಡಿದೆ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ರತಿ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಎಲ್ಲಾ ಕಾಲೇಜು ಮತ್ತಿತರೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಜೊತೆ ಸಭೆನಡೆಸಿ ಅರ್ಹರನ್ನು ಮತದಾರರಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸೂಚಿಸಲಾಗಿದೆ ಮತದಾರರ ಪಟ್ಟಿಯಲ್ಲಿ ನೋಂದಣಿ ಕುರಿತಂತೆ ಟಿ.ವಿ.ಗಳಲ್ಲಿ ಸ್ಥಳೀಯ ಚಾನಲ್ಗಳಲ್ಲಿ ಪ್ರಚಾರ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಮತದಾನ ಪ್ರಕ್ರಿಯೆ ಕುರಿತಂತೆ ಅಗತ್ಯ ರಕ್ಷಣಾ ಸಿಬ್ಬಂದಿಗಳ ನೇಮಕ ಕುರಿತಂತೆ ಈಗಾಗಲೇ ಎಸ್ಪಿ ಜೊತೆ ಸಭೆ ನಡೆಸಲಾಗಿದೆ. ಚುನಾವಣಾ ಆಯೋಗ ರಾಜ್ಯದಲ್ಲಿ ಎಷ್ಟು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸುತ್ತದೆ ಎಂಬುದರ ಆಧಾರದಲ್ಲಿ ಸಿಬ್ಬಂದಿಗಳ ನೇಮಕಾತಿ ನಡೆಯಲಿದೆ.
ಎಲೆಕ್ಟ್ರಾನಿಕ್ಸ್ ಓಟಿಂಗ್ ಮಿಷನ್ ಅಳವಡಿಕೆಯ ಜೊತೆಗೆ ಈ ಬಾರಿ ವಿವಿಪಿಎಟಿ ಉಪಕರಣವನ್ನು ಜೋಡಿಸಲಾಗುವುದು ಎಂದು ಹೇಳಿದರು.
ಈ ಉಪಕರಣ ಅಳವಡಿಸುವು ದರಿಂದ ಮತಯಂತ್ರದಲ್ಲಿ ನೋಂ ದಣಿ ಮಾಡಿದವರಿಗೆ ತಮ್ಮ ಮತ ಚಲಾವಣೆಯಾದ ಬಗ್ಗೆ ಖಚಿತತೆಯನ್ನು ನೀಡುತ್ತದೆ. ಈ ಬಗ್ಗೆ ಚುನಾ ವಣಾ ಆಯೋಗದ ಸೂಚನೆಯ ನಂತರ ಮತದಾನ ಖಾತ್ರಿ ಪಡಿಸುವ ಈ ಉಪಕರಣದ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಲಾಗುವುದು. ಅಂಗವಿಕಲರು ಮತದಾರರಾಗಿರು ವೆಡೆ ವ್ಹೀಲ್ಚೇರ್ಗಳ ಸೌಲಭ್ಯ ಒದ ಗಿಸಲಾಗುವುದು ಎಂದ ಅವರು, ಎಲ್ಲಾ ಮತಗಟ್ಟೆಗಳನ್ನು ಪರಿಶೀಲಿಸಲಾಗಿದ್ದು, ಅಲ್ಲಿಗೆ ಕುಡಿಯುವ ನೀರು, ವಿದ್ಯುತ್ ದೀಪದ ಸೌಲಭ್ಯ ಕುರಿತಂತೆ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಚುನಾವಣೆ ನಡೆಸಲು ಅಗತ್ಯವಿರುವ ಸಿಬ್ಬಂದಿಗಳ ನೇಮಕ ಕುರಿತಂತೆ ವಿವಿಧ ಇಲಾಖೆಗಳಲ್ಲಿ ಮಾಹಿತಿ ಸಂಗ್ರಹಕ್ಕೆ ಸೂಚಿಸಲಾಗಿದ್ದು, ಅಲ್ಪ ಸಂಖ್ಯಾತರು ಹೆಚ್ಚು ವಾಸಿಸುವ ಪ್ರದೇಶದಲ್ಲಿ ಮಹಿಳೆಯರು ಮತದಾನದಿಂದ ದೂರ ಉಳಿಯುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಭಾಗದ ಮತಗಟ್ಟೆಗಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗುವುದು. ಧಾರ್ಮಿಕ ಇತರೆ ಕಾರಣದಿಂದ ಮತದಾನದಿಂದ ಯಾರು ಹೊರಗುಳಿಯಬಾರದು ಎಂದು ಮುಂಜಾಗ್ರತಾ ಕ್ರಮತೆಗೆದುಕೊಳ್ಳುತ್ತಿರುವುದಾಗಿ ಸ್ಪಷ್ಟ ಪಡಿಸಿದರು.
ಜಿಲ್ಲೆಯಲ್ಲಿ ಒಬ್ಬರು ಪೊಲೀಸ್ ಅಧೀಕ್ಷಕರು, ಒಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 3 ಪೊಲೀಸ್ ಉಪವಿಭಾಗಗಳಿಗೆ 3 ಜನ ಡಿ.ವೈ.ಎಸ್.ಪಿ. ಗಳು, 9 ಪೊಲೀಸ್ ವೃತ್ತಗಳಿಗೆ 9 ಜನ ಅರಕ್ಷಕ ವೃತ್ತ ನಿರೀಕ್ಷಕರು, 30 ಪೊಲೀಸ್ ಠಾಣೆಗಳಿಗೆ 30 ಅರಕ್ಷಕ ಉಪನಿರೀಕ್ಷಕರು, ಎರಡು ಪೊಲೀಸ್ ಔಟ್ ಪೋಸ್ಟ್ ಹಾಗೂ ಒಂದು ಡಿ.ಎ.ಆರ್. ಘಟಕವು ಜಿಲ್ಲೆಯ ಪೊಲೀಸ್ ಬಂದೋಬಸ್ತ್ ನಲ್ಲಿ ತೊಡಗಿರುತ್ತದೆಸನ್ನದ್ದವಾಗಿರುವಂತೆ ನಿಯೋಜನೆಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಬ್ಬರು ಪೊಲೀಸ್ ಅಧೀಕ್ಷಕರು, ಒಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 3 ಪೊಲೀಸ್ ಉಪವಿಭಾಗಗಳಿಗೆ 3 ಜನ ಡಿ.ವೈ.ಎಸ್.ಪಿ. ಗಳು, 9 ಪೊಲೀಸ್ ವೃತ್ತಗಳಿಗೆ 9 ಜನ ಅರಕ್ಷಕ ವೃತ್ತ ನಿರೀಕ್ಷಕರು, 30 ಪೊಲೀಸ್ ಠಾಣೆಗಳಿಗೆ 30 ಅರಕ್ಷಕ ಉಪನಿರೀಕ್ಷಕರು, ಎರಡು ಪೊಲೀಸ್ ಔಟ್ ಪೋಸ್ಟ್ ಹಾಗೂ ಒಂದು ಡಿ.ಎ.ಆರ್. ಘಟಕವು ಜಿಲ್ಲೆಯ ಪೊಲೀಸ್ ಬಂದೋಬಸ್ತ್ ನಲ್ಲಿ ತೊಡಗಿರುತ್ತದೆಸನ್ನದ್ದವಾಗಿರುವಂತೆ ನಿಯೋಜನೆಗೊಳಿಸಲಾಗಿದೆ ಎಂದರು.
ಈ ಜಿಲ್ಲೆಯು ರಾಜಕೀಯ ಸೂಕ್ಷ್ಮತೆ ಹೊಂದಿರುವ ಜಿಲ್ಲೆಯಾಗಿದ್ದು, ಈ ಜಿಲ್ಲೆಯಲ್ಲಿ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಒಟ್ಟು 39 ಮತಗಟ್ಟೆಗಳಿದ್ದು, ಹಿಂದಿನ ಚುನಾವಣೆಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ವಹಿಸಿ ಚುನಾವಣಾ ಪ್ರಕ್ರಿಯೆಗಳು ಶಾಂತಿಯುತವಾಗಿ ನಡೆಯುವಂತೆ ಕ್ರಮವಹಿಸಿದ್ದು, ಮುಂಬರುವ ಚುನಾವಣೆಯಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಬಿಗಿಗೊಳಿಸಿ ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಯುವಂತೆ ಕ್ರಮವಹಿಸಲಾಗುವುದು ಎಂದರು.
6 ತಿಂಗಳ ಕಾಲ ಒಂದು ಪ್ರದೇಶದಲ್ಲಿ ವಾಸವಿದ್ದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಹತೆ ಪಡೆಯುತ್ತಾರೆ. ಆದರೆ ಅದು ಸರ್ಕಾರದ ಇತರೆ ಸೌಲಭ್ಯಗಳಿಗೆ ಮಾನದಂಡವಾಗುವುದಿಲ್ಲ. ಮತ ದಾನದ ಹಕ್ಕು ಮತ್ತು ನಾಗರೀಕ ಹಕ್ಕು ಗಳ ನಡುವೆ ವ್ಯತ್ಯಾಸವಿದೆ ಎಂದು ವಲಸಿಗರ ಕುರಿತಂತೆ ಅವರು ವಿವರ ನೀಡಿದರು.
ಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.
‘ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018ರ ಅಂದಾಜಿನಂತೆ 11.36044 ಮಂದಿ ಜನಸಂಖ್ಯೆ ಇದ್ದು ಒಟ್ಟು 9,02756 ಮತದಾರರಿದ್ದಾರೆ. ಅವರಲ್ಲಿ 4,53007ಪುರುಷರು ಹಾಗು 4,49749 ಮಹಿಳೆಯರಿದ್ದಾರೆ ಎಂದ ಅವರು ಒಟ್ಟು 1170ಮತ ಗಟ್ಟೆಗಳನ್ನು ತೆರೆಯಲಾಗುವುದು. ಅದರಲ್ಲಿ ಹಿಂದಿನ ಚುನಾವಣೆಯಲ್ಲಿ ಗುರ್ತಿಸಿರುವಂತೆ 149 ಅತಿಸೂಕ್ಷ್ಮ ಹಾಗೂ 226ಸೂಕ್ಷ್ಮ ಮತಗಟ್ಟೆಗಳಿವೆ. 795 ಸಾಮಾನ್ಯ ಮತಗಟ್ಟೆಗಳು ಎಂದು ತಿಳಿಸಿದ ಅವರು ಈ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಈಗಿನ ಪರಿಸ್ಥಿತಿ ಅವಲೋಕಿಸಿ ನಿರ್ಧ ರಿಸಲಾಗುವುದು’
- ಶ್ರೀರಂಗಯ್ಯ, ಜಿಲ್ಲಾಧಿಕಾರಿ, ಚಿಕ್ಕಮಗಳೂರು.