ಮಡಿಕೇರಿ: ಕೆ.ಎಸ್.ಆರ್.ಟಿ.ಸಿ ಬಸ್ಗಳ ನಡುವೆ ಢಿಕ್ಕಿ; ಗಾಯಾಳು ಮಹಿಳೆ ಮೃತ್ಯು
ಮಡಿಕೇರಿ, ಫೆ.9: ಸುಂಟಿಕೊಪ್ಪ ಸಮೀಪ ಶಾಂತಗಿರಿ ತಿರುವಿನಲ್ಲಿ ಫೆ.8 ರಂದು ಎರಡು ಕೆ.ಎಸ್.ಆರ್.ಟಿ.ಸಿ ಬಸ್ಗಳ ನಡುವೆ ಢಿಕ್ಕಿ ಸಂಭವಿಸಿ ಚಿಂತಾಜನಕ ಸ್ಥಿತಿಯಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹುಣುಸೂರು ನಿವಾಸಿ ಶಾಂತಿ (66) ಮೃತ ಮಹಿಳೆಯಾಗಿದ್ದು, ಫೆ.8 ರಂದು ಬಸ್ಗಳ ನಡುವೆ ಢಿಕ್ಕಿ ಸಂಭವಿಸಿದ ಸಂದರ್ಭ ಎರಡೂ ಬಸ್ಗಳ ಚಾಲಕರು ಮೃತಪಟ್ಟು, ಸುಮಾರು 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಂತಿ ಎಂಬ ಮಹಿಳೆ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story