ಸಾಧಿಸುವ ಛಲವಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ: ಮುರುಳೀಧರ ಹಾಲಪ್ಪ
ತುಮಕೂರು,ಫೆ.10:ಇಂದಿನ ಪೈಪೋಟಿ ಯುಗದಲ್ಲಿ ಸಾಧಿಸುವ ಛಲವಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಕೌಶ್ಯಲಾಭಿವೃದ್ದಿ ಮಂಡಳಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಅಶೋಕ ನಗರ ಬಡಾವಣೆ ಮೊದಲನೇ ಕ್ರಾಸ್ನ ಚರಕ ಆಸ್ಪತ್ರೆ ಎದುರು ಇರುವ ಯುವಶಕ್ತಿ ಎಜುಕೇಷನ್ ಸೆಂಟರ್ ನಲ್ಲಿ ಆಯೋಜಿಸಿದ್ದ ಕೌಶಲ್ಯಾಭಿವೃದ್ದಿ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಮಾತನಾಡುತಿದ್ದ ಅವರು, ದೊಡ್ಡ ಕನಸು ಕಾಣುವುದರ ಜೊತೆಗೆ, ಆ ಕನಸನ್ನು ನನಸು ಮಾಡಲು ನಿರಂತರ ಪರಿಶ್ರಮ ಪಡಬೇಕಿದೆ. ಆಗ ಮಾತ್ರ ನಿಶ್ಚಿತ ಗುರಿ ತಲುಪಲು ಸಾಧ್ಯವೆಂದರು.
ಇಡೀ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ತ್ಯಾಗಜೀವ ಮತ್ತೊಬ್ಬರಿಲ್ಲ.ಅವರ ಎಲ್ಲಾ ಸುಖಃಗಳನ್ನು ಬದಿಗಿಟ್ಟು ನಿಮಗಾಗಿ ಸುಖಃಕೋಸ್ಕರ ಹಗಲಿರುಳು ಶ್ರಮಿಸಿರುತ್ತಾರೆ.ಆದ್ದರಿಂದ ಅವರ ಆಸೆಗಳನ್ನು ಈಡೇರಿಸಲು ನೀವು ಮುಂದಾಗಬೇಕಿದೆ. ಅವರ ಇಚ್ಚೆಯನ್ನು ಅರಿತು ಒದು ಮುಂದುವರೆಸುವಂತೆ ಸಲಹೆ ನೀಡಿದರು.
ಇಂದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಮಾಹಿತಿಯಿದ್ದರೆ ಸಾಲದು, ಆ ಮಾಹಿತಿಯನ್ನು ಜ್ಞಾನವಾಗಿ ಪರಿವರ್ತಿಸಿ, ಅದನ್ನು ಹೇಗೆ ಕೆರಿಯರ್ ನಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಕೌಶಲ್ಯವನ್ನು ಗಳಿಸಿದರೆ ಮಾತ್ರ ಉತ್ತಮ ಉದ್ಯೋಗ ಪಡೆಯಲು ಸಾಧ್ಯ.ಇದಕ್ಕಾಗಿಯೇ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ಮಂಡಳಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೇ 22 ರಂದು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ವ್ಯಾಸಾಂಗಕ್ಕೆ ನೆರವು ನೀಡುವ ಸಲುವಾಗಿ ವಿದೇಶಕೋಷ್ಠವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.ವಿದೇಶದಲ್ಲ ಕಲಿಯಲು ಆಯ್ಕೆಯಾಗುವ ಮಕ್ಕಳಿಗೆ ಎಸ್.ಸಿ, ಎಸ್ಟಿ,ಓಬಿಸಿ ಹಾಗೂ ಅಲ್ಪಸಂಖ್ಯಾತರ ನಿಗಮಗಳಿಂದ 10 ರಿಂದ 25 ಲಕ್ಷ ರೂಗಳವೆರೆಗೆ ಅರ್ಥಿಕ ನೆರವು ಲಭಿಸಲಿದೆ.ಈ ಬಗ್ಗೆ ಮೈ ಟ್ರೀ ಸಂಸ್ಥೆಯೊಂದಿಗೆ ಕೌಶಲ್ಯಾಭಿವೃದಿ ಮಂಡಳಿ ಒಪ್ಪಂದ ಮಾಡಿಕೊಂಡಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ದಿನೇಶ್ ಮಾತನಾಡಿ, ಇಂದು ದೇಶದಲ್ಲಿ ಹಲವಾರು ಅದ್ವೀತಿಯ ಸಾಧನೆಗಳನ್ನು ಮಾಡಿರುವವರು ಸರಕಾರಿ ಶಾಲೆಗಳಲ್ಲಿ ಕಲಿತಿರುವ ಪ್ರತಿಭಾವಂತರು, ಗ್ರಾಮೀಣ ವಿದ್ಯಾರ್ಥಿಗಳು ಕೀಳಿರಿಮೆ ಬಿಟ್ಟು ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳ ಕನಸು ಕಾಣಬೇಕು. ನಿಮ್ಮ ಪೋಷಕರ ಆಸೆಯನ್ನು ಈಡೇರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿಗಳಾದ ದೊಡ್ಡಲಿಂಗಪ್ಪ, ರಾಜೇಗೌಡ,ಯುವಶಕ್ತಿ ಎಜುಕೇಷನ್ ಸೆಂಟರ್ನ ಮುಖ್ಯಸ್ಥ ನಟರಾಜು ಮತ್ತಿತರರು ಉಪಸ್ಥಿತರಿದ್ದರು.