ಲಯನ್ ಪದ್ಮನಾಭ ಎಲ್ ಶೆಟ್ಟಿ
ಸುರತ್ಕಲ್, ಫೆ.11: ಉದ್ಯಮಿ, ಲಯನ್ ಪದ್ಮನಾಭ ಎಲ್ ಶೆಟ್ಟಿ ಕಾಟಿಪಳ್ಳ (61) ಅವರು ಅಸೌಖ್ಯದಿಂದ ರವಿವಾರ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪದ್ಮನಾಭ ಶೆಟ್ಟಿ ಅವರು ಕಾಟಿಪಳ್ಳ ಶ್ರೀ ಗಣೇಶಪುರ ಮಹಾಗಣಪತಿ ದೇವಸ್ಥಾನದ ಮಾಜಿ ಆಡಳಿತ ನಿರ್ದೇಶಕರಾಗಿದ್ದರು. ಕಾಟಿಪಳ್ಳ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಸುರತ್ಕಲ್ ಬಂಟರ ಸಂಘದ ಮಾಜಿ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಾಟಿಪಳ್ಳದ 1ನೆ ಬ್ಲಾಕ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story