ದಾವಣಗೆರೆ: ಮಾರ್ಚ್ 2 ರಿಂದ, ಶರಣ ಸಂಸ್ಕೃತಿ, ಪ್ರಶಸ್ತಿ ಪ್ರಧಾನ, ಉತ್ಸವ ಸಹಜ ಶಿವಯೋಗ ಕಾರ್ಯಕ್ರಮ
ದಾವಣಗೆರೆ,ಫೆ.21: ಲಿಂಗೈಕ್ಯ ಶ್ರೀ ಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳ 61ನೇ ಸ್ಮರಣೋತ್ಸವ-2018 ಮತ್ತು ಜಯದೇವ ಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರಧಾನ ಸಮಾರಂಭ, ಶರಣ ಸಂಸ್ಕೃತಿ, ಉತ್ಸವ ಸಹಜ ಶಿವಯೋಗ ಕಾರ್ಯಕ್ರಮ ಮಾರ್ಚ್ 2, 3 ಮತ್ತು 4 ರಂದು ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗ ಮಂದಿರದಲ್ಲಿ ನಡೆಯಲಿದೆ ಎಂದು ಚಿತ್ರದುರ್ಗ ಬೃಹ್ಮನಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮರಣೋತ್ಸವ ಹಿನ್ನಲೆಯಲ್ಲಿ ಫೆ. 24ರಿಂದ ಮಾರ್ಚ್ 1ರ ವರೆಗೆ ಪ್ರತಿದಿನ ಸಂಜೆ ಶ್ರೀ ಜಯದೇವಲೀಲೆ ಪ್ರವಚನ, ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ. ಮಾ. 2ರಂದು ಸಂಜೆ 6.30ಕ್ಕೆ ಚಿಂತನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಡಾ. ಡಾ.ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸುವರು. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಯೋಗ ಗುರು ವಚನಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹಿರಿಯ ಸಾಹಿತಿ ಪ್ರೋ.ಚಂದ್ರಶೇಖರ ಪಾಟೀಲ್, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ಶಾಸಕ ಶಿವಶಂಕರ, ವಿಪ ಸದಸ್ಯ ವಿ.ಎಸ್. ಉಗ್ರಪ್ಪ ಪಾಲ್ಗೊಳ್ಳುವರು. ಇದೇ ವೇಳೆ ಜಯದೇವ ಪ್ರತಿಭಾವಂತ ವಿದ್ಯಾರ್ಥಿ -ವಿದ್ಯಾರ್ಥಿನಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಮಾ. 3ರಂದು ಸಂಜೆ 7.30ಕ್ಕೆ ಸಹಜ ಶಿವಯೋಗ ಕಾರ್ಯಕ್ರಮ ನಡೆಯಲಿದೆ. ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಮಹಾಸ್ವಾಮಿಗಳು, ಖಾಸಾಮಠ ಗುರುಮಠಕಲ್ ಶ್ರೀ ಶಾಂತವೀರ ಮುರುಘಾರಾಜೇಂದ್ರ ಸ್ವಾಮಿಗಳು, ಶಿಕಾರಿಪುರದ ಚನ್ನಬಸವ ಸ್ವಾಮಿಗಳು, ಶಿರಸಂಗಿ ಶ್ರೀ ಬಸವ ಮಹಾಂತ ಸ್ವಾಮಿಗಳು, ಸುರುಪುರ ಕಾಯಕದ ಬಸವನಾಂದ ಸ್ವಾಮಿಗಳು, ಹಾಲಸ್ವಾಮಿಗಳು, ಶಶಿಶೇಖರ ಸಿದ್ದಬಸವ ಸ್ವಾಮಿಗಳು, ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಮಾಜಿ ಶಾಸಕ ಯಾಜಮಾನ್ ಮೋತಿ ವೀರಣ್ಣ, ಡಾ.ಪ್ರೇಮಾ ನಾಗರಾಜ, ಶಿವಶರಣಪ್ಪ ಪಾಟೀಲ್ ತೇಲ್ಕೂರ್, ಜಿ.ಪಂ ಬಸವಂತಪ್ಪ ಪಾಲ್ಗೊಳ್ಳುವರು.
ಮಾ. 3ರಂದು ಬೆಳಗ್ಗೆ 9.30ಕ್ಕೆ ಉಚಿತ ನೇತ್ರಾ ಪರೀಕ್ಷೆ ಮತ್ತು ಚಿಕಿತ್ಸೆ ಕಾಯಕ್ರಮ ನಡೆಯಲಿದೆ. 11.30ಕ್ಕೆ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡವರು. ಸಂಜೆ 6.30ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆಗೆ ಜಯದೇವ ಪ್ರಶಸ್ತಿ, ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರಿಗೆ ಶೂನ್ಯಪೀಠ ಅಲ್ಲಮ ಪ್ರಶಸ್ತಿ, ಹಿರಿಯ ನ್ಯಾಯವಾದಿ ಪ್ರೇಮಿಳಾ ನೇಸರ್ಗಿಗೆ ಅಕ್ಕ ನಾಗಮ್ಮ ಪ್ರಶಸ್ತಿ, ಸಮಾಜ ಸೇವಕ ಡಾ.ಸಿ.ಆರ್. ನಸೀರ್ ಆಹಮದ್ ಶೂನ್ಯಪೀಠ ಚನ್ನಬಸವ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್, ಸಚಿವ ರಮೇಶ್ ಜಾರಕಿಹೊಳಿ ಭಾಗವಹಿಸುವರು. 4ರಂದು ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗ ಜರುಗಲಿದೆ. 9.30ಕ್ಕೆ ಆರೋಗ್ಯ ತಪಾಸಣೆ, ಔಷಧಿ ವಿತರಣೆ, ಸಂಜೆ 6.30ಕ್ಕೆ ಚಿಂತನ ಸಮಾವೇಶದ ಸಾನಿಧ್ಯವನ್ನು ಕಲುಬುರಗಿ ಡಾ.ಸಾರಂಗದ ದೇಶಿಕೇಂದ್ರ ಸ್ವಾಮಿಗಳು, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ವಾಲ್ಮೀಕಿ ಸ್ವಾಮಿಗಳು ವಹಿಸುವರು. ಅತಿಥಿಗಳಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಸತೀಶ್ ಜಾರಕಿಹೊಳಿ, ಕಿರುತೆರೆ ನಟಿ ಅಪರ್ಣ, ಸಿಹಿಕಹಿ ಚಂದ್ರು, ಭಾವನಾ ರಾಮಣ್ಣ, ವಿಶೇಷ ಅಹ್ವಾನಿತರಾಗಿ ನಟ ಉಪೇಂದ್ರ ಆಗಮಿಸುವರು.
ಮಾ. 5.6ರಂದು ಸಂಜೆ 6.30ಕ್ಕೆ ಜಮುರಾ ನಾಟಕೋತ್ಸವ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿರಕ್ತಮಠದ ಬಸವಪ್ರಭುಸ್ವಾಮಿಜೀ, ಮಾಜಿ ಶಾಸಕ ಮೋತಿ ವೀರಣ್ಣ ಹಾಜರಿದ್ದರು.
ಖರ್ಗೆ ಅವರಿಗೆ ಜಯದೇವ ಪ್ರಶಸ್ತಿ
ಲಿಂಗೈಕ್ಯ ಶ್ರೀ ಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳ 61ನೇ ಸ್ಮರಣೋತ್ಸವ ಅಂಗವಾಗಿ ಮಠದಿಂದ ನೀಡುವ ಪ್ರಶಸ್ತಿಗೆ ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಅವರಿಗೆ “ಜಯದೇವ ಪ್ರಶಸ್ತಿ”. ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರಿಗೆ ಶೂನ್ಯಪೀಠ ಅಲ್ಲಮ ಪ್ರಶಸ್ತಿ, ಹಿರಿಯ ನ್ಯಾಯವಾದಿ ಪ್ರೇಮಿಳಾ ನೇಸರ್ಗಿ ಅವರಿಗೆ ಅಕ್ಕ ನಾಗಮ್ಮ ಪ್ರಶಸ್ತಿ, “ಶೂನ್ಯಪೀಠ ಚನ್ನಬಸವ ಪ್ರಶಸ್ತಿಗೆ ಡಾ.ಸಿ.ಆರ್. ನಸೀರ್ ಆಹಮದ್ ಆಯ್ಕೆಯಾಗಿದ್ದಾರೆ.