ಮಂಡ್ಯ: ಪುಟ್ಟಣ್ಣಯ್ಯ ಕುಟುಂಬಕ್ಕೆ ಚುಂಚನಗಿರಿಶ್ರೀ ಸಾಂತ್ವನ
ಮಂಡ್ಯ, ಫೆ.21: ಪಾಂಡಪವುರ ತಾಲೂಕು ಕ್ಯಾತನಹಳ್ಳಿಯ ಕೆ.ಎಸ್.ಪುಟ್ಟಣ್ಣಯ್ಯ ಅವರ ಮನೆಗೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಬಧವಾರ ಭೇಟಿ ನೀಡಿ ಪತ್ನಿ ಸುನಿತಾ ಮತ್ತು ಕುಟುಂಬದವರಿಗೆ ಸ್ವಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿ ಸ್ವಾಮೀಜಿ, ಸದನದ ಒಳಗೆ, ಹೊರಗೆ ರೈತರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ ಪುಟ್ಟಣ್ಣಯ್ಯ ಅವರ ಸಾವಿನಿಂದ ರೈತಸಮುದಾಯಕ್ಕೆ ದೊಡ್ಡ ಆಘಾತವಾಗಿದೆ ಎಂದು ವಿಷಾದಿಸಿದರು.
ಪುಟ್ಟಣ್ಣಯ್ಯ ದೈಹಿಕವಾಗಿ ನಮ್ಮನ್ನು ಬಿಟ್ಟುಹೋಗಿದ್ದಾರೆ ಹೊರತು ಅವರ ಆದರ್ಶ, ತತ್ವಸಿದ್ದಾಂತಗಳು ನಮ್ಮೊಂದಿಗಿವೆ. ಮುಂದಿನ ದಿನಗಳಲ್ಲಿ ಚಳುವಳಿಯನ್ನು ರೈತಸಂಘದ ಮುಂಚೂಣಿ ನಾಯಕರು ಸಮರ್ಥವಾಗಿ ಮುನ್ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಮೈಸೂರು ಶಾಖಾಮಠದ ಸೋಮನಾಥಸ್ವಾಮೀಜಿ, ಹಾಸನ ಶಾಖಾಮಠದ ಶಂಭೂನಾಥಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಾಥಸ್ವಾಮಿ ಉಪಸ್ಥಿತರಿದ್ದರು.
Next Story