ಆದಿತ್ಯನಾಥ್ ವಿರುದ್ಧ ಕೊಲೆಯತ್ನ ಕೇಸ್ ಇದೆ: ಶೋಭಾಗೆ ದಿನೇಶ್ ಗುಂಡೂರಾವ್ ತಿರುಗೇಟು
ಬೆಂಗಳೂರು, ಫೆ.24: ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ನಾನೇನು ಹೆಚ್ಚು ಮಾತಾನಾಡಲು ಹೋಗುವುದಿಲ್ಲ. ಅವರು ಪ್ರಚಾರ ಪ್ರಿಯರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿ ಜನರಲ್ಲಿ ದ್ವೇಷವನ್ನ ಸೃಷ್ಟಿ ಮಾಡಿದಾಗ, ಗೂಂಡಾ ವರ್ತನೆ ತೋರಿದಾಗ ಇವರನ್ನು ಯಾರೂ ಕೇಳಬಾರದು. ತಪ್ಪು ಮಾಡಿದ್ರೆ ಇವರಲ್ಲಿ ಏನೂ ಶಿಕ್ಷೆ ಇಲ್ಲ. ಅಧಿತ್ಯನಾಥ್ ಮೇಲೆ ಕೊಲೆ ಯತ್ನ ಕೇಸ್ ಇದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಖಡಕ್ ನಿರ್ಧಾರ ತೆಗೆದುಕೊಂಡು ನಲಪಾಡ್ ಬಂಧನ ಮಾಡಿದೆ. ಅಲ್ಲದೇ ಪಕ್ಷದಿಂದ ಉಚ್ಚಾಟನೆ ಸೇರಿದಂತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದರು.
ಸಚಿವ ಅನಂತ್ ಕುಮಾರ್ ಹೆಗಡೆಯ ಗೂಂಡಾ ವರ್ತನೆ ಬಗ್ಗೆ ಯಾಕೆ ಇವರು ಮಾತನಾಡುವುದಿಲ್ಲ. ಪ್ರತಾಪ್ ಸಿಂಹನ ಗೂಂಡಾ ವರ್ತನೆ ಬಗ್ಗೆ ಯಾಕೆ ಬಿಜೆಪಿ ನಾಯಕರು ಮಾತನಾಡೊಲ್ಲ.ಬಿಜೆಪಿ ಪಕ್ಷದ ಕಾರ್ಯಕರ್ತನಿಂದಾಗಿ ಹುಡುಗಿಯೊಬ್ಬಳು ಪ್ರಾಣಕಳೆದುಕೊಂಡಳು. ಇದಕ್ಕಿಂತಾ ಗೂಂಡಾ ವರ್ತನೆ ಬೇರೆ ಬೇಕಾ ಎಂದು ಅವರು ಪ್ರಶ್ನಿಸಿದರು.
ಸಚಿವ ಆಂಜನೇಯ ಮೇಲಿರುವ ಆರೋಪ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಲಕ್ಷದಷ್ಟು ಬೋರ್ ವೆಲ್ ಗಳು ಇರಬಹುದು.
ನೀರಿನ ಅಗತ್ಯ ಇದ್ದಾಗ ಬೋರ್ ವೆಲ್ ಕೊರೆಯೋದ್ರಲ್ಲಿ ತಪ್ಪೇನು ಇಲ್ಲ ಎಂದು ದಿನೇಶ್ ಗುಂಡೂ ರಾವ್ ಅಭಿಪ್ರಾಯಪಟ್ಟರು.
.