ದಾವಣಗೆರೆ: ರೈತ ಕುಟುಂಬಕ್ಕೆ ಪರಿಹಾರ ವಿತರಣೆ
ದಾವಣಗೆರೆ,ಮಾ.2: ತಾಲೂಕಿನ ಹಳೇ ಕೊಳೇನಹಳ್ಳಿಯ ರೈತ ಕುಟುಂಬಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ತಾಲೂಕಿನ ಹಳೇ ಕೊಳೇನಹಳ್ಳಿಯ ರೈತ ಡಿ.ಕೆ.ಗುಡ್ಡಪ್ಪ ಎಂಬುವವರು ಇತ್ತೀಚೆಗೆ ಹೊಲದಲ್ಲಿ ಔಷಧಿ ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಇಲಾಖೆ ಮೂಲಕ 1 ಲಕ್ಷ ರೂ.ಪರಿಹಾರ ನೀಡುವಂತೆ ಸೂಚನೆ ನೀಡಿದ್ದರು.
ಮೃತ ರೈತ ಡಿ.ಕೆ.ಗುಡ್ಡಪ್ಪನವರ ಪತ್ನಿ ಸಿದ್ದಮ್ಮನವರಿಗೆ ಶಾಮನೂರು ಶಿವಶಂಕರಪ್ಪನವರು ಪರಿಹಾರದ ಚೆಕ್ ವಿತರಿಸಿದರು.
ಜಿಪಂ ಸದಸ್ಯರಾದ ಹದಡಿ ನಿಂಗಪ್ಪ, ಕೆ.ಹೆಚ್.ಓಬಳಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಉಮೇಶ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಬಿ.ಹೆಚ್.ವೀರಭದ್ರಪ್ಪ, ಎ.ಸಿ.ಜಯಣ್ಣ, ಡಿ.ಡಿ.ಬಸವರಾಜಪ್ಪ, ಉಪಸ್ಥಿತರಿದ್ದರು.
Next Story