ಮೈಸೂರು : ವಾಹನ ಸವಾರರನ್ನು ಅಡ್ಡಗಟ್ಟಿ ಹಣ ದೋಚಿದ ಖದೀಮರು
ಮೈಸೂರು,ಮಾ.9: ನಾಲ್ಕು ಮಂದಿಯ ಗುಂಪೊಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಸವಾರರನ್ನು ತಡೆದು ಅವರ ಬಳಿ ಇದ್ದ 20ಸಾವಿರ ರೂ.ಹಣವನ್ನು ಕಸಿದು ಪರಾರಿಯಾದ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಮ್ಮ ದ್ವಿಚಕ್ರ ವಾಹನದಲ್ಲಿ ಹೈವೇ ವೃತ್ತದ ಕಡೆಯಿಂದ ಶ್ರೀನಿವಾಸ ಟಾಕೀಸ್ ಕಡೆ ಹೋಗುತ್ತಿದ್ದ ಎನ್.ಆರ್.ಮೊಹಲ್ಲಾ ಮಂಜುನಾಥ ಪುರ ನಿವಾಸಿ ಮೊಹಮ್ಮದ್ ಶಫಿ ತಮ್ಮ ಭಾವನ ಜೊತೆ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ನಾಲ್ವರು ಅಪರಿಚಿತರು ಸ್ಕೂಟರನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಕು ತೋರಿಸಿ, ನಿಮ್ಮ ಕಿಸೆಯಲ್ಲಿ ಏನಿದೆ ಎಲ್ಲವನ್ನೂ ನೀಡಿ ಇಲ್ಲದಿದ್ದರೆ ಕೊಲ್ಲುತ್ತೇವೆ ಎಂದು ಬೆದರಿಕೆಯೊಡ್ಡಿ, ಅಪರಿಚಿತರು ಮೊಹಮದ್ ಶಫಿ ಅವರ ಕಿಸೆಯಲ್ಲಿದ್ದ ಇಪ್ಪತ್ತು ಸಾವಿರ ಹಣವನ್ನು ಕಸಿದು ಪರಾರಿಯಾಗಿದ್ದಾರೆ. ಈ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story