ತುಮಕೂರು: 'ಮಹಿಳಾ ಸಬಲೀಕರಣದ ಸಮಸ್ಯೆಗಳು ಮತ್ತು ಸವಾಲುಗಳು' ಕಾರ್ಯಗಾರ
ತುಮಕೂರು,ಮಾ.13: ಶಿಕ್ಷಣ ಪಡೆದು ಆರ್ಥಿಕವಾಗಿ ಸದೃಡವಾದಾಗ ಮಾತ್ರ ಸ್ವಾತಂತ್ರ್ಯವಾಗಿ ಬದುಕಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ದಿವ್ಯ.ವಿ.ಗೋಪಿನಾಥ್ ಅಭಿಪ್ರಾಯಪಟ್ಟಿದ್ದಾರೆ.
ಸುಫಿಯಾ ಕಾನೂನು ಕಾಲೇಜು ಮತ್ತು ಹೆಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ಮಹಿಳಾ ಸಬಲೀಕರಣದ ಸಮಸ್ಯೆಗಳು ಮತ್ತು ಸವಾಲುಗಳು ಎಂಬ ಕಾರ್ಯಗಾರ ಉದ್ಘಾಟಿಸಿ ಮಾತಾನಾಡುತಿದ್ದ ಅವರು, ಇಂದು ಎಲ್ಲರೂ ಸಬಲೀಕರಣದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ. ಸ್ವತಂತ್ರ್ಯವಾಗಿ ಸಬಲರಾಗುವುದು ಅತೀ ಮುಖ್ಯವಾಗಿದೆ. ಅದು ಸಾಧ್ಯಾವಾಗುವುದು ವಿದ್ಯೆ ಮತ್ತು ಆರ್ಥಿಕವಾಗಿ ಸ್ವತಂತ್ರ್ಯರಾಗಲು ಪ್ರಯತ್ನಿಸಿದಾಗ ಮಾತ್ರ ಎಂದರು.
ಇಂದಿನ ಯುವ ಪೀಳಿಗೆ ಜೀವನದ ಕಷ್ಟಗಳನ್ನು ಅರಿಯದೆ ಅಗತ್ಯವೆನ್ನುವುದೆಲ್ಲ ಪೋಷಕರಿಂದ ಪಡೆದು ಕಷ್ಟಪಡುವ, ಕಷ್ಟದ ಅರ್ಥವನ್ನು ಗ್ರಹಿಸುತ್ತಿಲ್ಲ. ಅದಕ್ಕೆ ವಿರುದ್ದವಾಗಿ ಅಡ್ಡದಾರಿಗಳ ಮೂಲಕ ಯಶಸ್ಸುಗಳಿಸಬಹುದೆಂಬ ಭ್ರಮೆಯಲ್ಲಿ ಇರುವುದು ಸಮಾಜಕ್ಕೆ ಆತಂಕ ಎಂದು ಅವರು, ಜೀವನದಲ್ಲಿ ಮೇಲ್ಪಂಕ್ತಿಗೆ ಬರುವುದು ಸಮಾಜದಲ್ಲಿ ಮೇಲ್ಪಂಕ್ತಿಯನ್ನು ಸಾಧಿಸಲು ಕಷ್ಟ ಪಡುವುದರಿಂದ ಮಾತ್ರ ಸಾಧ್ಯ. ಅಂತಹ ಆಲೋಚನೆ ಮಾಡುವಲ್ಲಿ ಯುವ ಪೀಳಿಗೆ ಪ್ರಯತ್ನಿಸಿದಾಗ ಮಾತ್ರ ಸಾಮಾಜಿಕ ಸಬಲೀಕರಣ ಸಾದಿಸಬಹುದೆಂದರು.
ಮಖ್ಯ ಅಥಿತಿಗಳಾಗಿ ಮಾತನಾಡಿದ ಪ್ರೊ.ಡಾ.ಕೆ.ಎಸ್.ಗಿರಿಜಾ, ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಎಲ್ಲಾ ರಂಗದಲ್ಲೂ ಮಹಿಳೆಯರು ಪ್ರಾತಿನಿಧ್ಯ ಸಾದಿಸಲು ಸಾಧ್ಯವಾಗುತ್ತಿಲ್ಲ. ಇಂದು ಪುರುಷ ಪ್ರಧಾನವಾದಂತಹ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಈಗಲೂ ಪುರುಷನ ಅಧೀನದಲ್ಲಿ ನಡೆಯಬೇಕದಂತಹ ಆತಂಕಕಾರಿ ಪರಿಸ್ಥಿತಿ ಇರುವುದು ಶೋಚಣಿಯ. ಆಡಳಿತ ನಡೆಸುವ ಕೆಲವೆ ಮಂದಿ ಮಹಿಳೆಯರು ಸಹ ಪುರುಷನ ನಿರ್ದೆಶನದಂತೆಯೆ ಆಡಳಿತ ನಡೆಸುತ್ತಿರುವುದು ಪುರುಷ ಪ್ರಾಬಲ್ಯವನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಷಫೀ ಅಹಮದ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದಂತಹ ರಹಮತುಲ್ಲ ಖಾನ್,ಸುಫಿಯಾ ಕಾನೂನು ಕಾಲೇಜಿನ ಪ್ರಾಚಾರ್ಯ ರಮೇಶ್.ಎಸ್ ಉಪಸ್ಥಿತರಿದ್ದರು.