ಮಂಡ್ಯ: ಸಾರಿಗೆ ಬಸ್ ಹರಿದು ಮೂರು ಕತ್ತೆಗಳು ಸಾವು
ಮಂಡ್ಯ,ಮಾ.17: ರಸ್ತೆಯಲ್ಲಿ ಸಾಗುತ್ತಿದ್ದ ಕತ್ತೆಯ ಹಿಂಡಿನ ಮೇಲೆ ಸಾರಿಗೆ ಬಸ್ ಹರಿದು ಮೂರು ಕತ್ತೆಗಳು ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕು ಕೆ.ಪಿ.ದೊಡ್ಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಕಾಡುಕೊತ್ತನಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಒಳ್ಳೆಯದಾಗಲಿಯೆಂದು 6 ಕತ್ತೆಗಳನ್ನು ಸಾಕಿದ್ದು, ದಾರಿತಪ್ಪಿ ಇಂದು ಪಕ್ಕದ ಕೆ.ಪಿ.ದೊಡ್ಡಿಗೆ ಬಂದಿದ್ದವು. ಈ ವೇಳೆ ಮಳವಳ್ಳಿಯಿಂದ ಮದ್ದೂರು ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಹರಿದು ಈ ಘಟನೆ ಜರುಗಿದೆ.
ಕತ್ತೆಗಳ ಸಾವಿನ ದೃಶ್ಯವನ್ನು ಕಂಡು ಮರುಗಿದ ಗ್ರಾಮಸ್ಥರು ಕತ್ತೆಗಳ ಕಳೇಬರಗಳನ್ನು ಕೆ.ಎಂ.ದೊಡ್ಡಿಯಲ್ಲಿ ಮೆರವಣಿಗೆ ನಡೆಸಿ ಅಂತ್ಯಸಂಸ್ಕಾರ ನಡೆಸಿದರು.
Next Story