ಸಿಎಂಗೆ ತಟ್ಟಿದ ನೀತಿ ಸಂಹಿತೆ ಬಿಸಿ
ಮೆಗಾ ಡೈರಿ ಉದ್ಘಾಟನೆ ಮಾಡದೇ ವಾಪಸ್
ಚಿಕ್ಕಬಳ್ಳಾಪುರ, ಮಾ.27: ದಿಲ್ಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದ ಕಾರಣ ತಕ್ಷಣವೇ ನೀತಿ ಸಂಹಿತೆ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಮೆಗಾ ಡೈರಿ ಉದ್ಘಾಟನೆ ಮಾಡದೇ ವಾಪಸ್ ತೆರಳಿದ್ದಾರೆ.
ಚುನಾವಣೆಯ ನೀತಿ ಸಂಹಿತೆ ಬಿಸಿ ರಾಜ್ಯದ ಸಿಎಂಗೆ ಮೊದಲ ಬಾರಿ ತಟ್ಟಿದೆ. 150 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡೈರಿಯನ್ನು ಉದ್ಘಾಟಿಸಲು ಇಲ್ಲಿಗೆ ಬಂದಿದ್ದ ಸಿಎಂ, ನೀತಿ ಸಂಹಿತೆ ಜಾರಿಯಾದ ಸುದ್ಧಿ ಕೇಳಿದ ತಕ್ಷಣ ಡೈರಿ ಉದ್ಘಾಟನೆ ಕಾರ್ಯಕ್ರಮ ಕೈಬಿಟ್ಟು ಡೈರಿಯ ಇಂಚಿಂಚು ವೀಕ್ಷಿಸಿ ತೆರಳಿದರು.
ಸರಕಾರಿ ಕಾರಿನಲ್ಲಿ ಇಲ್ಲಿಗೆ ಬಂದಿದ್ದ ಸಿಎಂ, ಸರಕಾರಿ ಕಾರು ಏರದೇ, ಸ್ಥಳೀಯ ಶಾಸಕ ಡಾ. ಸುಧಾಕರ್ ಅವರ ಖಾಸಗಿ ಕಾರಿನಲ್ಲಿ ವಾಪಸ್ ತೆರಳಿದರು.
Next Story