ಕೊಳ್ಳೇಗಾಲ: ಕುಮಾರಸ್ವಾಮಿಯನ್ನು ಸ್ವಾಗತಿಸಿ ಬಿಎಸ್ಪಿ, ಜೆಡಿಎಸ್ ಕಾರ್ಯಕರ್ತರಿಂದ ಬೈಕ್ರ್ಯಾಲಿ
ಕೊಳ್ಳೇಗಾಲ,ಏ.4: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಬಿಎಸ್ಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಬೈಕ್ರ್ಯಾಲಿ ಮೂಲಕ ಸ್ವಾಗತಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕುಮಾರಪರ್ವ ಕಾರ್ಯಕ್ರಮಕ್ಕೆ ಮಂಗಳವಾರ ಆಗಮಿಸಿದ ಅವರಿಗೆ ಪುಷ್ಪಮಾಲೆ ಹಾಕಿ, ಡೋಲು, ತಮಟೆ ಮೂಲಕ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮಹದೇಶ್ವರಬೆಟ್ಟದ ರಸ್ತೆಯಿಂದ ಎಡಿಬಿ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ, ಮಸೀದಿ ವೃತ್ತ, ಡಾ.ರಾಕುಮಾರ್ ರಸ್ತೆ, ಗುರುಕಾರ್ ವೃತ್ತದ ಮೂಲಕ ಎಂ.ಜಿ.ಎಸ್.ವಿ ಮೈದಾನಕ್ಕೆ ತೆರಳಿದರು.
ಮೆರವಣಿಗೆಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎನ್ಮಹೇಶ್, ಎಂಎಲ್ಸಿ ಶ್ರೀಕಂಠೇಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.
Next Story