ಭಾಗವತ ಸತೀಶ್ ಕೆದ್ಲಾಯ
ಉಡುಪಿ, ಮೇ 6: ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾಗಿದ್ದ ಹಾರ್ಯಾಡಿ ಸತೀಶ್ ಕೆದ್ಲಾಯ(46) ರವಿವಾರ ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರ ಸೇರಿ ಚಂದ್ರಹಾಸ ಪುರಾಣಿಕರಿಂದ ಯಕ್ಷಗಾನ ಅಭ್ಯಾಸ ಮಾಡಿದ ಇವರು, ಮುಂದೆ ಗೋರ್ಪಾಡಿ ವಿಠಲ ಪಾಟೀಲ ಮತ್ತು ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ನಡೆ ಭಾಗವತಿಕೆಗೆ ಸಂಬಂಧಪಟ್ಟು ಹೆಚ್ಚಿನ ತರಬೇತಿ ಪಡೆದರು.
ಯಕ್ಷಗಾನ ಕೇಂದ್ರದ ಯಕ್ಷರಂಗದಲ್ಲಿ ಭಾಗವತರಾಗಿ ಸುಮಾರು 20 ವರ್ಷ ಗಳ ಕಾಲ ದುಡಿದ ಕೆದ್ಲಾಯರು ಮುಂದೆ ಅತಿಥಿ ಭಾಗವತರಾಗಿ ಆಟ ಕೂಟ ಗಳಲ್ಲಿ ಭಾಗವಹಿಸುತ್ತಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿ ಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ ಹಾಗೂ ಯ್ಷ ಶಿಕ್ಷಣ ಟ್ರಸ್ಟ್ ಸಂತಾಪ ಸೂಚಿಸಿದೆ.
Next Story