ರಾಮಣ್ಣ ಪೂಜಾರಿ
ಬಂಟ್ವಾಳ, ಮೇ 22: ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಮೂವ ನಿವಾಸಿ ರಾಮಣ್ಣ ಪೂಜಾರಿ (72) ಅವರು ದೀರ್ಘ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಇತ್ತೀಚೆಗೆ ನಿಧನರಾದರು.
ರಾಮಣ್ಣ ಪೂಜಾರಿ ಅವರು ಸಿಪಿಐನ ಸದಸ್ಯರಾಗಿದ್ದು, ರೈತ ಹೋರಾಟ ಮತ್ತು ಕಾರ್ಮಿಕ ಚಳುವಳಿ, ಮೂರ್ತೆದಾರರ ಬೇಡಿಕೆಗಳ ಹೋರಾಟದಲ್ಲಿ ಸಕ್ರೀಯರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಮೃತರಿಗೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ತಾಲೂಕು ಕಾರ್ಯದರ್ಶಿ ಬಿ.ಶೇಖರ್, ಕೆ.ಈಶ್ವರ್, ಬಾಬು ಭಂಡಾರಿ ಸಂತಾಪ ಸೂಚಿಸಿದ್ದಾರೆ.
Next Story