ಮೂಡುಬಿದಿರೆ, ಜೂ. 9: ವೇಣೂರು ಕೊಪ್ಪ ಬಜಿರೆಯ ನಿವಾಸಿ ದಿ.ನಮಿರಾಜ್ ಇಂದ್ರ ಅವರ ಪತ್ನಿ ನಿರ್ಮಲ ಕುಮಾರಿ(76) ಸ್ವಗೃಹದಲ್ಲಿ ಶುಕ್ರವಾರ ನಿಧನ ಹೊಂದಿದರು.
ಕೃಷಿಕರಾಗಿದ್ದ ಅವರು ಮೂಡುಬಿದಿರೆ "ಪದ್ಮಶ್ರೀ ಸ್ಟುಡಿಯೋ"ದ ಮಾಲಕ ಅಭಯಕುಮಾರ್ ಜೈನ್ ಸಹಿತ ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.