Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪುರಾಣ ರೂಪಕಗಳನ್ನು ಮುರಿಯುವ ‘ರಾಮ ಮಂದಿರ...

ಪುರಾಣ ರೂಪಕಗಳನ್ನು ಮುರಿಯುವ ‘ರಾಮ ಮಂದಿರ ಯಾಕೆ ಬೇಡ?’

ಕಾರುಣ್ಯಾಕಾರುಣ್ಯಾ17 July 2018 12:29 AM IST
share
ಪುರಾಣ ರೂಪಕಗಳನ್ನು ಮುರಿಯುವ ‘ರಾಮ ಮಂದಿರ ಯಾಕೆ ಬೇಡ?’

‘ರಾಮ ಮಂದಿರ ಏಕೆ ಬೇಡ?’ ಕೆ. ಎಸ್. ಭಗವಾನ್ ಅವರು ಬರೆದಿರುವ ವೈಚಾರಿಕ ಲೇಖನಗಳ ಸಂಗ್ರಹ. ಕೃತಿಯ ಹೆಸರೇ ಅದರೊಳಗಿರುವ ವಸ್ತುವನ್ನು ಊಹಿಸುವಂತೆ ಮಾಡುತ್ತದೆ. ರಾಮಮಂದಿರ ರಾಜಕೀಯದ ವಿರುದ್ಧ ಹಲವು ದಶಕಗಳಿಂದ ಭಗವಾನ್ ಮಾತನಾಡುತ್ತಾ ಬಂದಿದ್ದಾರೆ. ಇದರ ಹಿಂದಿರುವ ವೈದಿಕ ರಾಜಕಾರಣದ ವಿರುದ್ಧ ಭಗವಾನ್ ಅವರಷ್ಟು ಸ್ಪಷ್ಟವಾಗಿ ಮಾತನಾಡುತ್ತಾ ಬಂದಿರುವ ಚಿಂತಕರು ಇನ್ನೊಬ್ಬರಿಲ್ಲ. ಈ ಹಿನ್ನೆಲೆಯಲ್ಲಿಯೇ ಅವರನ್ನು ಕೊಲ್ಲುವ ಸಂಚು ಕೂಡ ಇತ್ತೀಚೆಗೆ ಬಹಿರಂಗವಾಗಿದೆ. ಕೇಸರಿ ಉಗ್ರರು ಭಗವಾನ್ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. ಈ ಕೃತಿ ಬಿಜೆಪಿಯವರು ನಿರ್ಮಿಸಲು ಹೊರಟಿರುವ ರಾಮಮಂದಿರವನ್ನಷ್ಟೇ ಖಂಡಿಸುವುದಲ್ಲ. ಬದಲಿಗೆ ರಾಮನೇ ಭಾರತಕ್ಕೆ ಅಪ್ರಸ್ತುತ ಎನ್ನುವುದನ್ನು ಎತ್ತಿ ಹಿಡಿಯುತ್ತಾರೆ. ಈ ಹಿಂದೆ ಪೋಲಂಕಿಯವರು ‘ಸೀತಾಯಣ’ ಇದೇ ರೀತಿಯಲ್ಲಿ ರಾಮನ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನ ಮಾಡಿತ್ತು. ರಾಮಾಯಣದಲ್ಲಿ ಸೀತೆಯನ್ನೇ ಕೇಂದ್ರವಾಗಿಟ್ಟುಕೊಂಡು ರಾಮನ ವ್ಯಕ್ತಿತ್ವದ ದೌರ್ಬಲ್ಯಗಳನ್ನು ಅವರು ತೆರೆದಿಟ್ಟಿದ್ದರು.

‘ರಾಮರಾಜ್ಯ’ ಎನ್ನುವ ಪರಿಕಲ್ಪನೆಯನ್ನೇ ವಿರೋಧಿಸುವ ಭಗವಾನ್, ರಾಮಮಂದಿರ ಏಕೆ ಬೇಡ ಎನ್ನುವುದರಿಂದ ಹಿಡಿದು, ವಾಲ್ಮೀಕಿಯನ್ನೇ ಮುಂದಿಟ್ಟುಕೊಂಡು ರಾಮ ಹೇಗೆ ದೇವರಲ್ಲ ಎನ್ನುವುದನ್ನು ಹೇಳುತ್ತಾರೆ. ‘ದೇವತೆಗಳು ಬಡಿದಾಡುವುದಿಲ್ಲ, ಅವರು ವಾದಿಸುತ್ತಾರೆ, ಚರ್ಚಿಸುತ್ತಾರೆ, ಸಂವಾದಿಸುತ್ತಾರೆ. ಅವರ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಅಲ್ಲಿಗೇ ಮುಗಿಯುತ್ತದೆ...’ ಆದರೆ ಇಂತಹ ಯಾವ ಗುಣಗಳೂ ರಾಮನಲ್ಲಿ ಕಾಣುವುದಿಲ್ಲ ಎನ್ನುವುದನ್ನು ಅವರು ತಮ್ಮ ಲೇಖನಗಳಲ್ಲಿ ಬಿಡಿಸಿ ಹೇಳುತ್ತಾರೆ. ಹಾಗಾಗಿ ಮನುಷ್ಯ ತನ್ನ ಮೃಗತನ ಕಳೆದುಕೊಂಡು ಮನುಷ್ಯತ್ವ ಬೆಳೆಸಿಕೊಂಡು ದೇವತ್ವಕ್ಕೆ ಏರಲು ವಿವೇಕ, ವಿಚಾರ, ಮುಕ್ತ ಚಿಂತನೆ, ಸೈರಣೆ, ಪರ ವಿರೋಧಗಳ, ವಿಸ್ತಾರ ಓದು, ಸಂವಾದ ಮತ್ತು ವಿಚಾರಾತ್ಮಕ ಬರವಣಿಗೆ ಅಗತ್ಯವಾಗಿದೆ ಎನ್ನುವುದನ್ನೂ ಅವರ ಲೇಖನಗಳ ಮೂಲಕ ತಿಳಿಸಿಕೊಡುತ್ತಾರೆ.

ಈ ಕೃತಿ ಸಿಂಧೂ ನೆಲದ ಸುರ-ಅಸುರರ ಪುರಾಣ ಕತೆಗಳ ರೂಪಕಗಳನ್ನು ಒಡೆದು ಅದರ ವಾಸ್ತವಗಳನ್ನು ತೆರೆದಿಡುತ್ತದೆ. ರಾಮನ ಹಿನ್ನೆಲೆಯ ಕುರಿತಂತೆ ಜನಸಾಮಾನ್ಯರಿಗೆ ಅರಿಯದ ಹಲವು ವಿವರಗಳನ್ನು ಪುರಾಣಗಳಿಂದಲೇ ಎಳೆದು ಹೊರಗಿಡು ತ್ತಾರೆ. ಬೌದ್ಧ ಚಿಂತನೆಗಳ ವಿರುದ್ಧ ಹೇಗೆ ವೈದಿಕರು ಬೇರೆ ಬೇರೆ ಕತೆಗಳನ್ನು ಕಟ್ಟಿ ಯುದ್ಧ ಸಾರಿದರು ಎನ್ನುವ ಅಂಶಗಳನ್ನು ವಿವರಿಸುತ್ತಾರೆ. ಈ ನಿಟ್ಟಿನಲ್ಲಿ ಇಲ್ಲಿರುವ ಒಂಬತ್ತು ಲೇಖನಗಳೂ ಸತ್ಯವನ್ನು ತೆರೆದಿಡುವ ನಿಗಿ ನಿಗಿ ಕೆಂಡ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸಲು ಹೊರಟಿರುವವರ ಸಂಚುಗಳನ್ನೂ ಈ ಕೃತಿ ಬಯಲಿಗೆಳೆಯುತ್ತವೆ. ‘ಭಗವದ್ಗೀತೆಯು ಸ್ತ್ರೀ, ವೈಶ್ಯ, ಶೂದ್ರರನ್ನು ದ್ವೇಷಿಸುವ ಗ್ರಂಥ’ ಎನ್ನುವುದನ್ನು ಅದರಲ್ಲಿರುವ ಶ್ಲೋಕಗಳ ಆಧಾರದಲ್ಲೇ ಅವರು ಸಾಬೀತು ಪಡಿಸುತ್ತಾರೆ. ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸುತ್ತಾರೆ. ಲಡಾಯಿ ಪ್ರಕಾಶನ, ಗದಗ ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 138. ಮುಖಬೆಲೆ 100 ರೂಪಾಯಿ.

ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X