ಮಾಣಿಂಜ ರವೀಂದ್ರ ಪೂಜಾರಿ
ಬಂಟ್ವಾಳ, ಜು. 25: ಪ್ರಗತಿಪರ ಕೃಷಿಕ, ಪುಂಜಾಲಕಟ್ಟೆ-ಮಡಂತ್ಯಾರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ, ಕುಕ್ಕಳ ಗ್ರಾಮದ ಮಾಣಿಂಜ ನಿವಾಸಿ ರವೀಂದ್ರ ಪೂಜಾರಿ (83) ಅವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಾಮಾಜಿಕ ಸೇವಾ ಕಾರ್ಯಕರ್ತರಾಗಿದ್ದ ಅವರು ಲಯನ್ಸ್ ಕ್ಲಬ್ನ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದರು. ದಾನಿಗಳಾದ ಅವರು ಶಿಕ್ಷಣ, ಕ್ರೀಡೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ
ಕರಾಗಿದ್ದರು. ಕುಕ್ಕಳ ಗ್ರಾಪಂ ಮಾಜಿ ಸದಸ್ಯರಾಗಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಗೌರವ ಸಲಹೆಗಾರರು ಮತ್ತು ಮಹಾಪೋಷಕರಾಗಿದ್ದರು. ಬಸವನಗುಡಿ ಶ್ರೀಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಸಮಿತಿ ಪದಾಧಿಕಾರಿಯಾಗಿದ್ದರು. ಈ ಹಿಂದೆ ಜಾತ್ಯತೀತ ಜನತಾದಳ ಪಕ್ಷದ ಪ್ರಮುಖರಾಗಿದ್ದರು.
ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ವಸಂತ ಬಂಗೇರ, ಜಿ.ಪಂ. ತುಂಗಪ್ಪ ಬಂಗೇರ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.