ಹೊರಗಿನ ಬೆದರಿಕೆಗಳಿಗಿಂತ ದೇಶದೊಳಗಿನ ಬೆದರಿಕೆಗಳು ಹೆಚ್ಚು ಅಪಾಯಕಾರಿ: ಯೋಧ ಶ್ರೀಕಾಂತ ನಾಯ್ಕ
ಭಟ್ಕಳ, ಜು. 27: ನಮ್ಮ ದೇಶಕ್ಕೆ ಹೊರಗಿನ ಬೆದರಿಕೆಗಿಂತ ದೇಶದೊಳಗಿನ ಬೆದರಿಕೆಯನ್ನು ಎದುರಿಸುವುದೇ ಕಷ್ಟಕರವಾಗಿದೆ. ಕಾರ್ಗಿಲ್ ವಿಜಯೋತ್ಸವದ 19ನೇ ವರ್ಷವಿದಾಗಿದ್ದು ನಾವು ಅಂದು ಹಿಮದಿಂದ ಮುಚ್ಚಿಗೊಂಡಿರುವ ಸ್ಥಳದಲ್ಲಿ ಹೋರಾಡಿದ ನೆನಪು ಸದಾ ನೆನಪಿರುವಂತದ್ದು ಎಂದು ಯೋಧ ಶ್ರೀಕಾಂತ್ ನಾಯ್ಕ ಹೇಳಿದವರು.
ಇಲ್ಲಿನ ಆಸರಕೇರಿ ನಿಚ್ಚಲಮಕ್ಕಿ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಷದಲ್ಲಿ 8 ತಿಂಗಳು ಕಾರ್ಗಿಲ್ ಪ್ರದೇಶವು ಹಿಮದಿಂದ ಮುಚ್ಚಿಕೊಂಡಿರುವಂತದ್ದಾಗಿದ್ದು ಅಲ್ಲಿ ಸೈನಿಕರು ಕೂಡಾ ಇರುವುದು ಕಷ್ಟಕರವಾಗಿರುತ್ತದೆ. ಹಾಗಾಗಿ ಭಾರತ ಮತ್ತು ಪಾಕಿಸ್ಥಾನವು ಅಲ್ಲಿನ ಸೈನಿಕರನ್ನು ವಾಪಾಸು ಕರೆಯಿಸಿಕೊಳ್ಳುತ್ತದೆ. ಆದರೆ ಅದನ್ನೇ ದುರುಪಯೋಗ ಪಡಿಸಿಕೊಂಡ ಪಾಕಿಸ್ಥಾನ ಭಾರತದ ಪ್ರದೇಶವನ್ನು ಪ್ರವೇಶಿಸಿರುವುದೇ ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನ್ಯಕುಮಾರ್ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಯೋಧ ರಾಮಚಂದ್ರ ನಾವಡಾ, ನಾಗರಾಜ ಮೊಗೇರ, ಕೆ. ಸುರೇಶ, ರಾಘವೇಂದ್ರ ಮೊಗೇರ ಮುಂತಾದವರು ಉಪಸ್ಥಿತರಿದ್ದರು. ದಿನಕರ ನಾಯ್ಕ ಸ್ವಾಗತಿಸಿದರು.