ಮಂಗಳೂರು: ಸುರಕ್ಷಾ ಹಾಗೂ ದುರಂತ ನಿರ್ವಹಣೆ ಕಾರ್ಯಾಗಾರ
ಮಂಗಳೂರು, ಜು.27: ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಮತ್ತು ರೋವರ್ಸ್/ರೇಂಜರ್ಸ್ ಘಟಕವು ಜಿಲ್ಲಾ ದುರಂತ ನಿರ್ವಹಣೆ ಪ್ರಾಧಿಕಾರದ ಹಾಗೂ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಸುರಕ್ಷಾ ಹಾಗೂ ದುರಂತ ನಿರ್ವಹಣೆ ಕಾರ್ಯಾಗಾರ ನಡೆಸಿಕೊಟ್ಟಿತು.
ದುರಂತ ನಿರ್ವಹಣೆ ಪ್ರಾಧಿಕಾರದ ಅಧಿಕಾರಿ ವಿಜಯ್ ಮಾತನಾಡಿ, ಪ್ರಾಕೃತಿಕ ವಿಕೋಪಗಳು ಹಾಗೂ ಮಾನವ ನಿರ್ಮಿತ ದುರಂತಗಳು ಯಾವ ಸಂದರ್ಭದಲ್ಲಿಯೂ ಉಂಟಾಗಬಹುದು. ಆದ್ದರಿಂದ ಇಂತಹ ದುರಂತಗಳನ್ನು ಸಮರ್ಥವಾಗಿ ನಿಭಾಯಿಸಿ ಮಾನವ ಜೀವಕ್ಕೆ ಅಪಾಯ ಆಗದಂತೆ ಎಚ್ಚರ ವಹಿಸಬೇಕು ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣೆಯ ವಿಜಯವಾಡದ ಸದಸ್ಯರಾದ ಬಿಹಾರಿ ಸಿಂಗ್, ಬಿ. ಬೋಲೇಪನ್, ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸದಸ್ಯರಾದ ನಿತಿನ್, ಅಜಯ್, ಸಂತೋಷ್ ಪೀಟರ್ ಡಿಸೋಜ, ಅಶ್ವಿನ್, ವೇಣು ಶರ್ಮಾ, ಶಿರೀನ್ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಸಂಯೋಜಕ ಡಾ. ಮಹೇಶ್ ಕೆ.ಬಿ., ರೋವರ್ಸ್/ರೇಂಜರ್ಸ್ ಘಟಕದ ಸಂಯೋಜಕ ಡಾ. ಶೈಲಾರಾಣಿ ಬಿ. ಮತ್ತು ಪ್ರೊ. ಪುರುಷೋತ್ತಮ ಭಟ್ ಎನ್. ಉಪಸ್ಥಿತರಿದ್ದರು.