ಎಸ್ಸೆಸ್ಸೆಎಫ್ ವಿಟ್ಲ ಡಿವಿಷನ್ ವತಿಯಿಂದ ರಕ್ತದಾನ ಶಿಬಿರ
ಬಂಟ್ವಾಳ, ಜು. 28: ಎಸ್ಸೆಸ್ಸೆಎಫ್ ವಿಟ್ಲ ಡಿವಿಷನ್ ವತಿಯಿಂದ ಮಂಗಳೂರು ಎಜೆ ಆಸ್ಪತ್ರೆ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಎಫ್ ಜಿಲ್ಲಾ ರಕ್ತದಾನ ಅಭಿಯಾನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಕಂಬಳಬೆಟ್ಟುವಿನಲ್ಲಿ ನಡೆಯಿತು.
ದ.ಕ. ವಕ್ಫ್ ಸಲಹಾ ಸಮಿತಿ ಸದಸ್ಯ ರಶೀದ್ ವಿಟ್ಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ದಿನವೊಂದಕ್ಕೆ 35,000 ಯೂನಿಟ್ ರಕ್ತದ ಅಗತ್ಯತೆಯಿದ್ದು, ಕರ್ನಾಟಕದಲ್ಲಿ 1,500 ಯೂನಿಟ್ನ ಅವಶ್ಯಕತೆ ಇದೆ. ಮಂಗಳೂರು ನಗರವೊಂದರಲ್ಲಿ 60 ರಿಂದ 80 ಯೂನಿಟ್ ನಷ್ಟು ರಕ್ತ ಬೇಕಾಗುತ್ತದೆ. ಆದ್ದರಿಂದ ರಕ್ತದಾನಿಗಳು ಹೆಚ್ಚೆಚ್ಚು ಉದಾರತೆ ತೋರಬೇಕು. ರಕ್ತ ನೀಡಲು ಜನಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಹಮ್ಮಿಕೊಂಡ ಸಾರ್ವತ್ರಿಕ ರಕ್ತದಾನ ಶಿಬಿರ ಶ್ಲಾಘನೀಯ ಎಂದು ಹೇಳಿದರು.
ರಕ್ತ ಕೇವಲ ಕೆಂಪು ಬಣ್ಣ ಮಾತ್ರವಲ್ಲ. ಅದರಲ್ಲಿ ರಕ್ತ ಕಣ, ಬಿಳಿ ಕಣ, ಪ್ಲಾಸ್ಮಾ, ಪ್ಲೇಟ್ಲೆಟ್ ಮೊದಲಾದ ಕಣಗಳನ್ನು ಹೊಂದಿವೆ. ರಕ್ತಕ್ಕೆ ಬದಲಾಗಿ ಮತ್ತೊಬ್ಬ ಮಾನವನ ರಕ್ತವೇ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಈ ತನಕ ಸೃಷ್ಟಿಯಾಗಿಲ್ಲ. ರಕ್ತದಾನ ಎಂಬುವುದು ಜಾತಿ, ಧರ್ಮವನ್ನು ಮೀರಿ ನಿಂತಿದೆ ಎಂದು ಹೇಳಿದರು.
ಅಬೂಬಕ್ಕರ್ ಫೈಝಿ ಸುನ್ನಿ ದುಆ ಆಶೀರ್ವಚನ ನೀಡಿದರು. ಅಬ್ದುಲ್ ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಲೀಂ ಹಾಜಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮೊಹಿದ್ದೀನ್ ಹಾಜಿ, ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಜಂಶಾದ್ ಕಂಬಳಬೆಟ್ಟು, ಅಬ್ದುಲ್ ಖಾದರ್ ಕೊಡಂಗಾಯಿ, ರಝಾಕ್ ಪೆಲ್ತಡ್ಕ, ಕಾಸಿಂ ಸಖಾಫಿ ಅಳಕೆಮಜಲು, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಅಬೂಬಕ್ಕರ್ ಕೊಳಂಬೆ, ಅಬ್ದುಲ್ ರಝಾಕ್ ಮುಸ್ಲಿಯಾರ್, ಅಬ್ದುಲ್ ಕರೀಂ ಕದ್ಕಾರ್, ಅಬ್ದುಲ್ ಗಫೂರ್ ಕಂಬಳಬೆಟ್ಟು, ಸಿದ್ದೀಕ್ ಮಿಸ್ಬಾಹಿ ಕರೋಪಾಡಿ, ರಹೀಂ ಸಖಾಫಿ ವಿಟ್ಲ, ಶಾಕೀರ್ ಅಳಕೆಮಜಲು, ಇಬ್ರಾಹಿಂ ಮುಸ್ಲಿಯಾರ್, ಎಂಕೆಎಂ ಕಾಮಿಲ್ ಸಖಾಫಿ, ಸಲೀಂ ಬೈರಿಕಟ್ಟೆ, ಝಕಾರಿಯ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.