ಎಸ್.ಜೆ.ಎಂ ಉಪ್ಪಿನಂಗಡಿ ರೇಂಜ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಮುತ್ತಲಿಬ್ ಸಖಾಫಿ, ಪ್ರ.ಕಾರ್ಯದರ್ಶಿಯಾಗಿ ಲತೀಫಿ ಕುಂತೂರು ಆಯ್ಕೆ
ಉಪ್ಪಿನಂಗಡಿ,ಜು. 25: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಉಪ್ಪಿನಂಗಡಿ ರೇಂಜ್ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ 2018-2021 ನೇ ಸಾಲಿನ ಮಹಾಸಭೆ ಇತ್ತೀಚೆಗೆ ಮುಫತ್ತಿಸ್ ಹಾಫಿಲ್ ಹನೀಫ್ ಮಿಸ್ಬಾಹಿ ಗೇರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ನೆಕ್ಕಿಲಾಡಿ ಖುವ್ವತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ನೆಕ್ಕಿಲಾಡಿ ಉಮರುಲ್ ಫಾರೂಖ್ ಜುಮಾ ಮಸೀದಿ ಖತೀಬ್ ಡಿ.ಎಚ್ ಇಬ್ರಾಹಿಂ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಸ್ಮಾನ್ ಸಅದಿ ಕಿರಾಅತ್ ಪಠಿಸಿದರು. ನಂತರ ಪ್ರದಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡ್ ವರದಿ ಹಾಗೂ ರೇಂಜ್ ಕೋಶಾದಿಕಾರಿ ಅಲ್ ಹಾಜ್ ಉಮರ್ ಕುಂಞಿ ಮುಸ್ಲಿಯಾರ್ ಮಂಡಿಸಿದ ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ರೇಂಜ್ ಅಧ್ಯಕ್ಷ ಮುತ್ತಲಿಬ್ ಸಖಾಫಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ನಂತರ ರೀಟೈನರ್ ಆಫಿಸರ್ ಆಗಿ ಆಗಮಿಸಿದ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರು ರವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮುತ್ತಲಿಬ್ ಸಖಾಫಿ ಸರಳಿಕಟ್ಟೆ, ಪ್ರ.ಕಾರ್ಯದರ್ಶಿಯಾಗಿ ಅಬ್ದುರ್ರಝಾಕ್ ಲತೀಫಿ ಕುಂತೂರು ಆಯ್ಕೆಯಾದರು. ಕೋಶಾಧಿಕಾರಿಯಾಗಿ ಅಲ್ ಹಾಜ್ ಉಮರ್ ಕುಂಞಿ ಮುಸ್ಲಿಯಾರ್, ಪರೀಕ್ಷೆ ವಿಭಾಗದ ಉಪಾಧ್ಯಕ್ಷರಾಗಿ ಅಶ್ರಫ್ ಝೈನಿ ಮುರ, ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಅಹ್ಸನಿ ಉಳಿತೊಟ್ಟು, ಟ್ರೈನಿಂಗ್ ವಿಭಾಗದ ಉಪಾಧ್ಯಕ್ಷರಾಗಿ ಉಸ್ಮಾನ್ ಸಅದಿ ತೆಕ್ಕಾರು, ಕಾರ್ಯದರ್ಶಿಯಾಗಿ ಖಲೀಲ್ ಸಅದಿ ಸರಳಿಕಟ್ಟೆ ನೇಮಕಗೊಂಡರು.
ಮಿಶನರಿ ವಿಭಾಗದ ಉಪಾಧ್ಯಕ್ಷರಾಗಿ ಎಂ ಎಚ್ ಅಬೂಬಕ್ಕರ್ ಸಖಾಫಿ ಕರ್ವೇಲು, ಕಾರ್ಯದರ್ಶಿಯಾಗಿ ಮುಹಮ್ಮದ್ ಸಖಾಫಿ ಬಾಜಾರು, ಕ್ಷೇಮನಿದಿ ವಿಭಾಗದ ಉಪಾಧ್ಯಕ್ಷರಾಗಿ ಡಿ ಎಚ್ ಇಬ್ರಾಹಿಂ ಸಅದಿ ನೆಕ್ಕಿಲಾಡಿ, ಕಾರ್ಯದರ್ಶಿಯಾಗಿ ರಫೀಕ್ ಸಖಾಫಿ ನೆಲ್ಯಾಡಿ, ಮ್ಯಾಗಝಿನ್ ವಿಭಾಗದ ಉಪಾಧ್ಯಕ್ಷರಾಗಿ ಮುಹಮ್ಮದ್ ಮಿಸ್ಬಾಹಿ ವಳಾಲ್, ಕಾರ್ಯದರ್ಶಿಯಾಗಿ ಕಬೀರ್ ಸಅದಿ ನೆಕ್ಕಿಲಾಡಿ ಮತ್ತು ಜಿಲ್ಲಾ ಕೌನ್ಸಿಲ್ ಆಗಿ ಮುತ್ತಲಿಬ್ ಸಖಾಫಿ, ಲತೀಫಿ ಕುಂತೂರು, ಬಶೀರ್ ಮದನಿ,ಶರೀಫ್ ಸಅದಿ ರವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ಉಪ್ಪಿನಂಗಡಿ ರೇಂಜ್ ನಿಂದ ನಿರ್ಗಮಿಸುತ್ತಿರುವ ನಿಕಟಪೂರ್ವ ಪ್ರದಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಹಾಗೂ ಕಾರ್ಯದರ್ಶಿ ಸಿದ್ದೀಕ್ ಸಅದಿ ರವರನ್ನು ರೇಂಜ್ ವತಿಯಿಂದ ಬಿಳ್ಕೊಡಲಾಯಿತು.
ಕೊನೆಯಲ್ಲಿ ಮುಫತ್ತಿಸ್ ಹಾಫಿಲ್ ಮಿಸ್ಬಾಹಿ ಹಾಗೂ ಲತೀಫ್ ಸಖಾಫಿ ಮಾಡನ್ನೂರು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿದರು
ನಿಖಟಪೂರ್ವ ಕಾರ್ಯದರ್ಶಿ ಅಬ್ಬಾಸ್ ಮದನಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಲತೀಫಿ ಕುಂತೂರು ವಂದಿಸಿದರು.