ಕೊರಗ ಸಮುದಾಯದ ಕುಟುಂಬಗಳಿಗೆ ಕೃಷಿಭೂಮಿ ನೀಡಲು ಆಗ್ರಹ
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ಶಾಸಕರಿಗೆ ಅಹವಾಲು ಸಲ್ಲಿಕೆ
ಉಡುಪಿ, ಜು.29: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ಇದರ ವತಿಯಿಂದ ಕೊರಗ ಸಮುದಾಯದ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳ ಅಹವಾಲುಗಳನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರಿಗೆ ಇಂದ್ರಾಳಿ ಕೊರಗ ಭವನದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಸಲ್ಲಿಸ ಲಾಯಿತು.
ಸಮುದಾಯದ ಹೆಚ್ಚಿನ ಕುಟುಂಬಗಳಲ್ಲಿ ಭೂಮಿ ಸಂಬಂಧಿಸಿದ ದಾಖಲೆ ಗಳು ಸರಿಯಾಗಿರದೆ ಸರಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನಸಂಪರ್ಕ ಸಭೆಗಳನ್ನು ಸಂಘಟಿಸಿ ಪರಿಹಾರ ಮಾಡಬೇಕು. ಡಾ.ಮುಹಮ್ಮದ್ ಧೀರ್ ವರದಿಯಂತೆ ಈ ಬಾರಿಯ ಸ್ವಾತಂತ್ರ ದಿನದಂದು ಕನಿಷ್ಠ 10 ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಕೃಷಿಭೂಮಿ ನೀಡಲು ಕ್ರಮ ತೆಗೆದು ಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಸಮುದಾಯದ ವಸತಿ ರಹಿತ ಕುಟುಂಬ ಗಳಿಗೆ ನಿವೇಶನಗಳನ್ನು ವಿತರಿಸಬೇಕು. ಸಮುದಾಯದ ನಿರುದ್ಯೋಗಿಗಳಿಗೆ ಚಾಲಕರಾಗಿ ದುಡಿಯಲು ಅನುಕೂಲವಾಗುವ ನಿಟ್ಟಿನಲ್ಲಿ ವಾಹನ ಚಾಲನೆಯ ಪರವಾನಿಗೆ, ಬ್ಯಾಡ್ಜ್ ಪಡೆಯಲು ಶೈಕ್ಷಣಿಕ ಅರ್ಹತೆಯನ್ನು ಕನಿಷ್ಠ 10ನೆ ತರಗತಿಯಿಂದ ಏಳನೆ ತರಗತಿಗೆ ಸೀಮಿತಗೊಳಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಲಾಗಿದೆ.
ಇಲಾಖೆ ಹಾಗೂ ಗ್ರಾಪಂಗಳಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಆಯ್ಕೆ ಮಾಡು ವಾಗ ಶಿಕ್ಷಣ ಹಾಗೂ ಅರ್ಹತೆಯನ್ನು ಪರಿಗಣಿಸಿ ಸಮುದಾಯದ ಯುವ ಜನರಿಗೆ ಆದ್ಯತೆ ನೀಡಬೇಕು. ಸಮುದಾಯಕ್ಕೆ ಸರಕಾರ ಈಗ ಹೊಸ ಮನೆ ನಿರ್ಮಾಣಕ್ಕೆ 2ಲಕ್ಷ ರೂ. ನೀಡುತ್ತಿದ್ದು, ಅದನ್ನು 4.5ಲಕ್ಷ ರೂ.ಗೆ ಹೆಚ್ಚಿಲು ಕ್ರಮ ತೆಗೆದುಕೊಳ್ಳಬೇಕು.
ಅನಾರೋಗ್ಯ, ಪೌಷ್ಠಿಕ ಆಹಾರದ ಕೊರತೆ ಹಾಗೂ ದುಶ್ಚಟಗಳಿಗೆ ಕೊರಗ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಆದುದರಿಂದ ಸಮುದಾಯ ದ ಪ್ರತಿಯೊಬ್ಬರಿಗೂ ಸಮಗ್ರ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಕಾರ್ಡ್ ನೀಡಬೇಕು. ಕೊರಗರ ಹಾಡಿಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಭೆ ಕರೆದು ಕಾಲಮಿತಿಯೊಳಗೆ ಕ್ರಿಯಾಯೋಜನೆ ರೂಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒಕ್ಕೂಟ ಒತ್ತಾಯಿಸಿದೆ.
ಮನವಿ ಸ್ವೀಕರಿಸಿದ ಶಾಸಕ ರಘುಪತಿ ಭಟ್ ಸಮುದಾಯದ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಕರ್ನಾಟಕ ಕೇರಳ ಅಧ್ಯಕ್ಷೆ ಅಮ್ಮಣ್ಣಿ ಚೋರಾಡಿ, ಪ್ರಧಾನ ಕಾರ್ಯ ದರ್ಶಿ ದಿವಾಕರ ಕಳತ್ತೂರು, ಉಪಾಧ್ಯಕ್ಷರಾದ ವಿಶ್ವನಾಥ್ ಪೆರ್ಡೂರು, ಗಿರಿಜಾ ಜನ್ನಾಡಿ, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬೊಗ್ರ ಕೊಕ್ಕರ್ಣೆ, ಒಕ್ಕೂಟದ ಮಾಜಿ ಅಧ್ಯಕ್ಷೆ ಸುಶೀಲಾ ನಾಡ, ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತ ರಿದ್ದರು. ಪುತ್ರನ್ ಹೆಬ್ರಿ ಸ್ವಾಗತಿಸಿದರು. ರೂಪಾ ವಂದಿಸಿದರು. ಪ್ರಿಯ ಕಾರ್ಯ ಕ್ರಮ ನಿರೂಪಿಸಿದರು.