ಲಯನ್ಸ್ ಕ್ಲಬ್ನಿಂದ ಮಂಗಳೂರಿಗೆ ಹಸಿರ ಮೆರಗು ಕಾರ್ಯಕ್ರಮ
ಮಂಗಳೂರು, ಜು.29: ನಗರದ ಮಂಗಳಾದೇವಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಉರ್ವಸ್ಟೋರ್ನಿಂದ ಕೊಟ್ಟಾರದವರೆಗೆ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು.
ಮನಪಾ ಮುಖ್ಯಸಚೇತಕ ಶಶಿಧರ ಹೆಗ್ಡೆ ಮಾತನಾಡಿ ಮಂಗಳೂರಿಗೆ ಹಸಿರು ಮೆರಗು ನೀಡುವ ಸಂಘಟನೆಗಳ ಕಾರ್ಯ ಶ್ಲಾಘನೀಯವಾದುದು ಎಂದರು.
ಈ ಸಂದರ್ಭ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ, ಕಾರ್ಪೊರೇಟರ್ ನಾಗವೇಣಿ , ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಎಸ್ಸೈ ವನಜಾಕ್ಷಿ, ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ್ ಪೂಜಾರಿ, ಲಯನೆಸ್ ಕ್ಲಬ್ ಅಧ್ಯಕ್ಷೆ ಕುಶಲಾ ಯಶವಂತ್, ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ನವೀನ್ ಚಂದ್ರ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಸಿ.ಕರ್ಕೇರ, ಮಂಗಳೂರು ಮಹಿಳಾ ಘಟಕದ ಕಾರ್ಯದರ್ಶಿ ರವಿಕಲಾ, ಉಪಾಧ್ಯಕ್ಷೆ ಉಮಾಶ್ರೀಕಾಂತ್, ಸಲಹೆಗಾರ ಪರಮೇಶ್ವರ ಪೂಜಾರಿ, ಸಂಚಾಲಕಿ ರೇಖಾ ಗೋಪಾಲ್ ವಲಯಾಧ್ಯಕ್ಷ ಹರೀಶ್ ಕೆ., ದಿವಾಕರ್ ಬಿ.ಎಸ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.