ಪಕ್ಕಲಡ್ಕದಲ್ಲಿ ಗಿಡ ನೆಡುವ ಕಾರ್ಯಕ್ರಮ
ಮಂಗಳೂರು, ಜು. 31: 'ವಿಶ್ವ ಶಾಂತಿಗೆ ಧಾರ್ಮಿಕ ವಿಧ್ಯೆ' ಎಂಬ ಧ್ಯೇಯವಾಕ್ಯದೊಂದಿಗೆ 60ನೇ ವಾರ್ಷಿಕ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ (ಮದ್ರಸ ಅಧ್ಯಾಪಕರ ಒಕ್ಕೂಟ) ಹಮ್ಮಿ ಕೊಂಡಂತಹ 60 ಕಾರ್ಯ ಯೋಜನೆಗಳ ಪೈಕಿ ಹತ್ತನೆಯ ಯೋಜನೆ ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮವು ಬಜಾಲ್ ಪಕ್ಕಲಡ್ಕ ಎಸ್ ಕೆ ಎಸ್ ಬಿ ವಿ ವತಿಯಿಂದ ಮುಹ್ಯುದ್ದೀನ್ ಮದರಸ ಪರಿಸರದಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಹಾಗೂ ಮಂಗಳೂರು ರೇಂಜ್ ಉಪಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ನೇತೃತ್ವ ವಹಿಸಿದ್ದರು. ಸದರ್ ಮುಅಲ್ಲಿಂ ಅನ್ವರ್ ಅಝ್ಹರಿ ಸಸಿ ವಿತರಿಸಿದರು. ಮುಅಲ್ಲಿಮರಾದ ಹಾರಿಸ್ ಅಶ್ರಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಬಿ ವಿ ಅಧ್ಯಕ್ಷ ಝಾಹಿದ್, ಕಾರ್ಯದರ್ಶಿ ಝಿಯಾದ್, ಆಶಿಸ್, ಕೋಶಾಧಿಕಾರಿ ಫಲಲುದ್ದೀನ್, ತಾಸೀರ್, ಫಯಾಝ್, ನಾಝಿಂ, ಶುಹೈಬ್, ನಿಹಾಲ್ , ಸುಫೈದ್ ಮುಂತಾದವರು ಭಾಗವಹಿಸಿದರು.
Next Story