ಮಾಹಿತಿ ನೀಡದ ಬಂದರು ಅಧಿಕಾರಿಗಳು: ಆರೋಪ
ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮುಸ್ಲಿಂ ಲೀಗ್ ಮನವಿ
ಮಂಗಳೂರು, ಜು.31: ಹಳೆ ಬಂದರು ಅಧಿಕಾರಿಗಳಿಗೆ 2014 ಮತ್ತು 2015ರಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ನೋಟಿಸ್ಗಳನ್ನು ನೀಡುತ್ತಾರೆ. ಆದರೆ ಅದರಲ್ಲಿ ಯಾವುದೇ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ ಎಂದು ಮುಸ್ಲಿಂ ಲೀಗ್ನ ಬೆಂಗ್ರೆ ವಲಯಾಧ್ಯಕ್ಷ ಎಂ.ಕೆ. ಅಶ್ರಫ್ ಆರೋಪಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಬಂದರು ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿದರೆ ಸ್ವೀಕರಿಸುವುದಿಲ್ಲ. ಅದನ್ನು ತಿರಸ್ಕರಿಸುವುದೂ ಇಲ್ಲ. ಇದರಿಂದ ನೇರವಾಗಿ ಸರಕಾರ ಹಾಗೂ ಜನಸಾಮಾನ್ಯರಿಗೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ಬಂದರು ಅಧಿಕಾರಿಗಳು ತಮಗೆ ಬೇಕಾದವರಿಗೆ ಕೆಲಸಗಳನ್ನು ಮಾಡಿ ಕೊಡುತ್ತಿದ್ದಾರೆ. ಆದರೆ ಜನಸಾಮಾನ್ಯರನ್ನು ನಿರ್ಲಕ್ಷಿ ಸಲಾಗುತ್ತಿದೆ ಎಂದು ಆರೋಪಿಸಿದರು.
ಬಂದರು ಇಲಾಖೆಯಿಂದ ಕ್ಲಿನಿಂಗ್, ಲೈಟಿಂಗ್, ಹೂಳೆತ್ತುವುದು, ಬೂಟು ನಿಲ್ಲುವ ಜಟ್ಟಿ ದುರಸ್ತಿ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡುವುದಿಲ್ಲ. ಕಚೇರಿಯಲ್ಲಿರುವ ಬೆಂಗ್ರೆ, ಕುದ್ರೋಳಿ ಮತ್ತು ಬಂದರ್ ಪ್ರದೇಶದ ಅರ್ಜಿಗಳನ್ನು ಪರಿಶೀಲಿಸಿ ವಿವರಣೆ ನೀಡಲು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಸಲ್ಲಿಸಲಾಯಿತು.