ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾಗಿ ಯಾಸೀನ್ ಮಲ್ಪೆ ಪುನರಾಯ್ಕೆ
ಉಡುಪಿ, ಜು.31: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಯಾಸೀನ್ ಮಲ್ಪೆ ಪುನರಾಯ್ಕೆಯಾಗಿದ್ದಾರೆ.
ಇಂದು ಉಡುಪಿ ಅಜ್ಜರಕಾಡಿನ ಮಹಿಳಾ ಸಮಾಜ ಸಭಾಭವನದಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿ ಅವರು ಆಯ್ಕೆಯಾದರು. ಉಡುಪಿ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಅಬ್ದುರ್ರಶೀದ್ ಉಮರಿ ಉದ್ಘಾಟಿಸಿದರು. ಚುನಾವಣೆಯ ಮೇಲ್ವಿಚಾರಕರಾಗಿ ಜಮೀಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಹುಸೈನ್ ಕೋಡಿಬೆಂಗ್ರೆ ದೈವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಖಾಸಿಂ ಬಾರಕೂರು ಗತ ಆದಾಯ-ವೆಚ್ಚಗಳನ್ನು ಮಂಡಿಸಿದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಂಗಳೂರು, ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.
ಅಲ್ ಇಬಾದ ಇಸ್ಲಾಮಿಕ್ ಸ್ಕೂಲ್ನ ವ್ಯವಸ್ಥಾಪಕ ಮೌಲಾನ ಅಬ್ದುಲ್ಲತೀಫ್ ಮದನಿ ಸಮಾರೋಪ ಭಾಷಣ ಮಾಡಿದರು. ಮದೀನಾ ಯುನಿರ್ವಸಿಟಿಯ ಸಂಶೋಧನಾ ವಿದ್ಯಾರ್ಥಿ ಹಾಗೂ ಮಸ್ಜಿದುನ್ನಬವಿ ಮದೀನಾದ ಮಾರ್ಗದರ್ಶಕರಲ್ಲೊಬ್ಬರಾದ ಶೇಖ್ ಫರ್ವೇಝ್ ಮದನಿ ಮಲ್ಪೆ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಹಿತವಚನ ನೀಡಿದರು.
ಇದೇ ಸಂದರ್ಭ ಒಕ್ಕೂಟದ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿಯ ಸದಸ್ಯರಾಗಿ ಕೇಂದ್ರ ಮಟ್ಟದಿಂದ ಮುಹಮ್ಮದ್ ಮೌಲಾ, ಅಶ್ಫಾಕ್ ಅಹ್ಮದ್ ಕಾರ್ಕಳ, ಅಬ್ದುಲ್ ಮುನಾಫ್ ಕಂಡ್ಲೂರು, ಅಬ್ದುರ್ರಹ್ಮಾನ್ ಮಲ್ಪೆ, ಜಿ. ಸರ್ದಾರ್ ಗುಲ್ವಾಡಿ, ಮುಹಮ್ಮದ್ ಇದ್ರೀಸ್ ಹೂಡೆ, ಉಮರ್ ಫಾರೂಕ್ ಪಡುಬಿದ್ರೆ, ಸಲಾಹುದ್ದೀನ್ ಅಬ್ದುಲ್ಲಾ ಹೂಡೆ ಉಡುಪಿ, ಮುಶ್ತಾಕ್ ಅಹ್ಮದ್ ಬೆಳ್ವೆ ಆಯ್ಕೆಯಾದರು.
ತಾಲೂಕುವಾರು ಆಯ್ಕೆಯಲ್ಲಿ ಉಡುಪಿ ತಾಲೂಕಿನಿಂದ ಹಾಜಿ ಅಬ್ದುಲ್ಲಾ ಪರ್ಕಳ, ಅಬ್ದುಲ್ ಅಝೀಝ್ ಉದ್ಯಾವರ, ಶಾಹಿದ್ ಅಲಿ ತೋನ್ಸೆ, ಹಬೀಬ್ ಅಲಿ ಅಂಬಾಗಿಲು, ಮುನೀರ್ ಕಲ್ಮಾಡಿ, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ, ಮುಹಮ್ಮದ್ ಮರಕಡ ಮತ್ತು ಟಿ.ಎಂ.ಝಫರುಲ್ಲಾ ಹೂಡೆ ಜಿಲ್ಲಾ ಸಮಿತಿಗೆ ಆಯ್ಕೆಯಾದರು.
ಕುಂದಾಪುರ ತಾಲೂಕಿನಿಂದ ರಫೀಕ್ ಗಂಗೊಳ್ಳಿ, ಶಾಬಾಸ್ ಹಂಗ್ಳೂರು, ಮುಹಮ್ಮದ್ ಅನ್ಸಾರ್ ಹಳೆಯಂಗಡಿ, ದಸ್ತಗೀರ್ ಕಂಡ್ಲೂರು, ಹನೀಫ್ ಗುಲ್ವಾಡಿ ಆಯ್ಕೆಯಾದರು.
ಬೈಂದೂರು ತಾಲೂಕಿನಿಂದ ಮೌಲಾನ ಝಮೀರ್ ಅಹ್ಮದ್ ಕಿರಿಮಂಜೇಶ್ವರ, ಶಮ್ಸ್ ತಬ್ರೇಝ್ ಬೈಂದೂರು, ಮುಹಮ್ಮದ್ ರಫೀಕ್ ನಾಗೂರು, ಶೇಖ್ ಫಯಾಝ್ ಅಹ್ಮದ್ ಮತ್ತು ಶೇಖ್ ಅಝ್ಮತುಲ್ಲಾ ಆಯ್ಕೆಯಾದರು.
ಬ್ರಹ್ಮಾವರ ತಾಲೂಕಿನಿಂದ ಇಬ್ರಾಹೀಂ ಸಾಹೇಬ್ ಕೋಟಾ, ಅಸ್ಲಮ್ ಹೈಕಾಡಿ, ತಾಜುದ್ದೀನ್ ಬ್ರಹ್ಮಾವರ, ಇಲ್ಯಾಸ್ ಸಾಸ್ತಾನ ಮತ್ತು ಆಲಂ ರಝಾಕ್ ಬ್ರಹ್ಮಾವರ ಆಯ್ಕೆಯಾದರು.
ಕಾಪು ತಾಲೂಕಿನಿಂದ ಶಭಿ ಅಹ್ಮದ್ ಖಾಝಿ, ಇಕ್ಬಾಲ್ ಕಟಪಾಡಿ, ಅನ್ವರ್ ಅಲಿ ಕಾಪು, ಅಬ್ದುಲ್ ಅಝೀಝ್ ಹೆಜಮಾಡಿ ಮತ್ತು ಇಸ್ಮಾಯೀಲ್ ಹುಸೈನ್ ಕಟಪಾಡಿ ಆಯ್ಕೆಯಾದರು.
ಕಾರ್ಕಳ ತಾಲೂಕಿನಿಂದ ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ಸೈಯದ್ ಹಸನ್ ಕಾರ್ಕಳ, ಸೈಯದ್ ಅಬ್ಬಾಸ್, ನೂರ್ ನವಾಝ್ ಹಾಗೂ ಮುಹಮ್ಮದ್ ಗೌಸ್ ಆಯ್ಕೆಯಾದರು.
ಇದಲ್ಲದೆ ಜಿಲ್ಲಾ ಸಮಿತಿ ಸದಸ್ಯರು ಸೇರಿ 10 ಸದಸ್ಯರನ್ನು ಜಿಲ್ಲಾ ಸಮಿತಿಗೆ ಸಹಕರಣ ಮಾಡಲಾಯಿತು. ಹುಸೈನ್ ಕೋಡಿಬೆಂಗ್ರೆ, ಖತೀಬ್ ರಶೀದ್ ಮಲ್ಪೆ, ಖಾಸಿಂ ಬಾರಕೂರು, ಸಾದಿಕ್ ಅಬೂ ಹಾಜಿ, ನಕ್ವ ಯಹ್ಯಾ ಮಲ್ಪೆ, ಅಬೂಬಕರ್ ಆತ್ರಾಡಿ, ಮನ್ಸೂರ್ ಇಬ್ರಾಹೀಂ ನಾವುಂದ, ತೌಫೀಕ್ ಸಲಫಿ ಗಂಗೊಳ್ಳಿ, ರಿಯಾಝ್ ಕೋಡಿ ಕುಂದಾಪುರ, ಖಾಲಿದ್ ಮಣಪುರ ಜಿಲ್ಲಾ ಸಮಿತಿಗೆ ನೇಮಿಸಲ್ಪಟ್ಟರು.
ಮೌಲಾನ ಝಮೀರ್ ಅಹ್ಮದ್ ರಶಾದಿ ಕಿರಾಅತ್ ಪಠಿಸಿದರು.