ಕುಂಬಳೆ: ಏಳೂವರೆ ಕೆಜಿ ಗಾಂಜಾ ಸಹಿತ ಯುವಕನ ಸೆರೆ
ಮಂಜೇಶ್ವರ, ಆ.2: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನೋರ್ವನನ್ನು ಚೇವಾರಿನಲ್ಲಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಮೀಂಜ ಮೀಯಪದವಿನ ಹುಸೈನ್(24) ಬಂಧಿತ ಆರೋಪಿ. ಈತನಿಂದ ಏಳೂವರೆ ಕೆ.ಜಿ. ಗಾಂಜಾ ಹಾಗೂ ಇದರ ಸಾಗಾಟಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಆಂಧ್ರ ಪ್ರದೇಶದಿಂದ ಕೇರಳಕ್ಕೆ ಗಾಂಜಾವನ್ನು ತರುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಪೂರ್ವ ಮಾಹಿತಿ ಪಡೆದ ಕುಂಬಳೆ ಸಿಎ ಪ್ರೇಮ್ ಸದನ್ ನೇತೃತ್ವದ ಪೊಲೀಸರು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.
ಬುಧವಾರ ರಾತ್ರಿ 12 ಗಂಟೆಗೆ ಚೇವಾರಿನಲ್ಲಿ ಮಾರುತಿ ಕಾರೊಂದನ್ನು ತಪಾಸಣೆಗಾಗಿ ನಿಲ್ಲಿಸುವಂತೆ ಪೊಲೀಸರು ಸೂಚಿಸಿದಾಗ ಅದರ ಚಾಲಕ ನಿಲ್ಲಿಸಿದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿ ಹಿಡಿದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್ಸೈ ವಿನೋದ್, ಸಿವಿಲ್ ಪೊಲೀಸ್ ಆಫೀಸರ್ ಗಳಾದ ಪ್ರಕಾಶ್, ರಂಜಿತ್, ಜೀಪ್ ಚಾಲಕ ರಾಜೀವನ್ ಭಾಗಿಯಾಗಿದ್ದರು.
Next Story