ಬಸ್ ಚಾಲಕರ,ನಿರ್ವಾಹಕರ ಬೇಜವಾಬ್ದಾರಿಯುತ ಪ್ರಯಾಣ: ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ
ಮಂಗಳೂರು, ಆ. 2: ನಗರದಲ್ಲಿ ಹಲವಾರು ಶಾಲಾ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಗ್ರಾಮಾಂತರ ಪ್ರದೇಶದಿಂದ ಮತ್ತು ನಗರದ ಒಳಗಿನಿಂದ ಬಸ್ಸಿನ ಮೂಲಕ ವಿದ್ಯಾರ್ಥಿಗಳು ಪ್ರಯಾಣಿಸುತ್ತಾ ಕಾಲೇಜಿಗೆ ಬರುತ್ತಿದ್ದಾರೆ. ಬೆಳಗ್ಗಿನ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಅಪಾರ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬಸ್ಸಿನ ಪ್ರವೇಶ ಬಾಗಿಲಿನಲ್ಲಿ ನೇತಾಡುತ್ತಿರುವುದು ಕಂಡು ಬರುತ್ತಿದೆ. ಬಸ್ ಚಾಲಕರ ಮತ್ತು ನಿರ್ವಾಹಕರು ತಮ್ಮೊಳಗಿನ ಪೈಪೋಟಿ ಭರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ಸಮಿತಿಯು ಡಿಸಿಪಿ (ಸಂಚಾರ ವಿಭಾಗ) ಉಮಾ ಪ್ರಶಾಂತ್ ರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂದು ಮನವಿ ಮಾಡಿಲಾಯಿತು ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಇಮ್ರಾನ್ ಪಿ.ಜೆ ಉಪಾಧ್ಯಕ್ಷರಾಧ ಫಹದ್ ಕಾರ್ಯದರ್ಶಿ ಸಾದಿಕ್ ಮತ್ತು ನಿಝಾಂ ಉಪಸ್ಥಿತರಿದ್ದರು.
Next Story