ಪರಸ್ಪರ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ, ಜು. 2: ಪರಸ್ಪರ ಹಲ್ಲೆಗೈದ ಘಟನೆ ಚೆನ್ನೈತ್ತೋಡಿ ಗ್ರಾಪಂ ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮ ರಾಮೊಟ್ಟುವಿನಲ್ಲಿ ನಿನ್ನೆ ಸಂಜೆ ನಡೆದಿದ್ದು, ಈ ಬಗ್ಗೆ ನಾಲ್ವರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದ ಆಚಾರ್ಯ ಅವರ ವಿರುದ್ಧ ಕರುಣಾಕರ ಅವರು ಜಾತಿ ನಿಂದನೆ, ಹಲ್ಲೆ ಬಗ್ಗೆ ದೂರು ನೀಡಿದ್ದು, ಪ್ರತಿಯಾಗಿ ಆನಂದ ಆಚಾರ್ಯ ಅವರು ಕರುಣಾಕರ, ಮೋಹನ್ದಾಸ ಗಟ್ಟಿ, ಶಿವಪ್ಪ ಅವರು ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಚೆನ್ನೈತ್ತೋಡಿ ಗ್ರಾಪಂ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ನಡೆದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಬಾಬು ಮೇಸ್ತ್ರಿ ಎಂಬವರು ಪಾನಮತ್ತರಾಗಿ ವಾಗ್ವಾದಕ್ಕೆ ಇಳಿದಾಗ ಸಭೆಯಿಂದ ಹೊರಹೋಗುವಂತೆ ಆನಂದ ಆಚಾರ್ಯ ಎಂಬವರು ಹೇಳಿದ್ದು ಘಟನೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ ರಾಮೊಟ್ಟು ಬಸ್ ನಿಲ್ದಾಣದ ಬಳಿ ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿಕೊಂಡು ಬಳಿಕ ಪುಂಜಾಲಕಟ್ಟೆ ಹಾಗೂ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಗುರುವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾಸಕ ಭೇಟಿ: ಕೊಡಂಬೆಟ್ಟು ಗ್ರಾಮದ ರಾಮೋಟ್ಟು ಎಂಬಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುಗಳನ್ನು ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ವಿಚಾರಿಸಿದರು.
ಈ ಸಂಧರ್ಭದಲ್ಲಿ ದಿನೇಶ್ ಅಮ್ಟೂರು, ಸಂತೋಷ್ ಕುಮಾರ್ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮೇಶ್ ಕುದ್ರೆಬೆಟ್ಟು, ಗಂಗಾದರ ಕೋಟ್ಯಾನ್, ರುಕ್ಮಯ ಬಂಗೇರ, ಶೇಖರ ಕಡ್ತಲಬೆಟ್ಟು ಉಪಸ್ಥಿತರಿದ್ದರು.