ಮೊಂಟೆಪದವು: ಆ.4ರಂದು ಎಸ್ಸೆಸ್ಸೆಫ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೊಂಟೆಪದವು, ಆ.3: ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ವತಿಯಿಂದ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಹಾಗೂ ನರಿಂಗಾನದ ಯೆನೆಪೊಯ ಹೋಮಿಯೋಪತಿ, ಆಯುರ್ವೇದಿಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ತಾಜುಲ್ ಉಲಮಾ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆಗಸ್ಟ್ 4ರಂದು ಮೊಂಟೆಪದವುವಿನ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಶಿಬಿರವನ್ನು ಅಂದು ಬೆಳಗ್ಗೆ ಬೆಳಿಗ್ಗೆ 9 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಅಧ್ಯಕ್ಷತೆ ವಹಿಸುವರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ, ಅಬ್ದುಲ್ ಜಲೀಲ್ ಮೋಂಟುಗೋಳಿ, ಸಂತೋಷ್, ವಸಂತ ಕೋಡಿ, ಮರಿಕ್ಕಳ ಶಾಖಾಧ್ಯಕ್ಷ ಮನ್ಸೂರ್ ಹಿಮಮಿ ಅತಿಥಿಗಳಾಗಿರುವರು.
ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯೀಲ್ ಮೀನಂಗೋಡಿ, ಮುರಳೀಧರ ಶೆಟ್ಟಿ, ಎಸ್.ಎಂ.ಮುಹಮ್ಮದ್ ಫಯಾಝ್ ಮೊಂಟೆಪದವು, ಆಲಿಕುಂಞಿ ಅಗಲ್ತಬೆಟ್ಟು, ಚಂದ್ರಶೇಖರ ಶೆಟ್ಟಿ ಮರಿಕ್ಕಳ, ಪಿಲಿಫ್ ಡಿಸೋಜ, ಗೋಪಾಲ ಭಟ್, ಇರ್ಷಾದ್ ಮದನಿ ಮೊಂಟೆಪದವು, ಅಬ್ದುಲ್ ರಹಿಮಾನ್ ಚಂದಹಿತ್ತಿಲು ಉಪಸ್ಥಿತರಿರುವರು ಎಂದು ಅಝರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.