ಆ.04: ಮಣಿಹಳ್ಳದಲ್ಲಿ 'ನಮ್ಮ ಮಕ್ಕಳು ನಮ್ಮವರಾಗಲು' ಜನಜಾಗೃತಿ ಕಾರ್ಯಕ್ರಮ
ಬಂಟ್ವಾಳ,ಆ.03: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಸುತ್ತೋಲೆಯಲ್ಲಿ ತಿಳಿಸಿದಂತೆ ಎಲ್ಲಾ ಸೆಕ್ಟರ್ ನಲ್ಲಿ ನಡೆಸಬೇಕಾದ 'ನಮ್ಮ ಮಕ್ಕಳು ನಮ್ಮವರಾಗಲು' ಎಂಬ ಘೋಷವಾಕ್ಯದೊಂದಿಗೆ ನಡೆಯುವ ಜನಜಾಗೃತಿ ಸಭೆಯು ಆ.04 ರಂದು ಬಂಟ್ವಾಳ ಸೆಕ್ಟರ್ ವ್ಯಾಪ್ತಿಯ ಮಣಿಹಳ್ಳ ಜಂಕ್ಷನಿನಲ್ಲಿ ನಡೆಯಲಿದೆ.
ಅಲ್ಲದೇ, ಬಂಟ್ವಾಳ ಡಿವಿಷನ್ ವ್ಯಾಪ್ತಿಯ ಸೆಕ್ಟರ್ ಗಳಾದ ಮಂಚಿ, ಕಲ್ಲಡ್ಕ ಮತ್ತು ಪಾಣೆಮಂಗಳೂರು ಸೆಕ್ಟರ್ ಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜಯಗೊಳಿಸಬೇಕೆಂದು ಬಂಟ್ವಾಳ ಡಿವಿಷನ್ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story