ಈಶ್ವರಮಂಗಳ ತ್ವೈಬ ಅಧ್ಯಕ್ಷರಾಗಿ ಕಣ್ಣವಂ ತಂಙಳ್
ಪುತ್ತೂರು, ಆ. 3: ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸ ಗುರಿಯಿಟ್ಟು ಪುತ್ತೂರು ಈಶ್ವರಮಂಗಳದಲ್ಲಿ ಕಾರ್ಯಾಚರಿಸುತ್ತಿರುವ ತ್ವೈಬ ಎಜುಕೇಶನಲ್ ಸೆಂಟರ್ ನೂತನ ಅಧ್ಯಕ್ಷರಾಗಿ ಸಯ್ಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ಆಯ್ಕೆಯಾಗಿದ್ದಾರೆ.
ಕಳೆದ ದಿನ ನಡೆದ ಸಂಸ್ಥೆಯ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು. ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್, ಪೂಕುಂಹಿ ತಂಙಳ್ ಆದೂರು, ಪಿ ಎ ಉಸ್ತಾದ್ ಸುರಿಬೈಲು ಸಂಸ್ಥೆಯ ರಕ್ಷಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳಾಗಿ ಹಂಝ ಮುಸ್ಲಿಯಾರ್ (ವರ್ಕಿಂಗ್ ಅಧ್ಯಕ್ಷರು) ಅಬ್ದುಲ್ ಅಝೀಝ್ ಮಿಸ್ಬಾಹಿ (ಪ್ರ. ಕಾರ್ಯದರ್ಶಿ) ಅಬ್ದುಲ್ ರಹ್ಮಾನ್ ಚಾಯ್ಸ್ (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ. ಸಂಸ್ಥೆಯು ಮುಂದಿನ ವರುಷಗಳಲ್ಲಿ ಹಲವಾರು ನೂತನ ಪದ್ಧತಿಗಳೊಂದಿಗೆ ಕಾರ್ಯಾಚರಿಸಲಿದ್ದಾರೆ ಎಂದು ಸಂಸ್ಥೆಯ ನೂತನ ನಾಯಕರು ತಿಳಿಸಿದ್ದಾರೆ.
ಸುರಿಬೈಲು ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಪಿ ಎ ಉಸ್ತಾದರ ಅಧ್ಯಕ್ಷತೆಯಲ್ಲಿ ಸೇರಿದ ಕಾರ್ಯಕಾರಿ ಸಭೆಯನ್ನು ಕಣ್ಣವಂ ತಂಙಳ್ ಉದ್ಘಾಟಿಸಿದರು. ಅಝೀಝ್ ಮಿಸ್ಬಾಹಿ ಸ್ವಾಗತಿಸಿ, ವಂದಿಸಿದರು.