ನಾಡದೋಣಿ ಸೀಮೆಎಣ್ಣೆ ವಿಶೇಷ ರಹದಾರಿ: ಹೊಸತು, ನವೀಕರಣಕ್ಕೆ ಜಂಟಿ ತಪಾಸಣೆ
ಉಡುಪಿ, ಆ.3: ತಾಲೂಕಿನಲ್ಲಿ 2018-19ನೇ ಸಾಲಿನ ಮೀನುಗಾರಿಕಾ ಸೀಮೆಎಣ್ಣೆ ಹೊಸತು ಮತ್ತು ನವೀಕರಣಕ್ಕಾಗಿ ಆಹಾರ, ಕಂದಾಯ ಮತ್ತು ಮೀನುಗಾರಿಕೆ ಇಲಾಖೆಗಳ ಮೂಲಕ ಜಂಟಿ ತಪಾಸಣೆಯನ್ನು ಉಡುಪಿಯ ಮಲ್ಪೆ, ಪಡುಬಿದ್ರಿ ಕೇಂದ್ರಗಳಲ್ಲಿ ಆ.6, 7, 8 ಮತ್ತು 9ರಂದು ಹಮ್ಮಿ ಕೊಳ್ಳಲಾಗಿದೆ.
ಜಂಟಿ ತಪಾಸಣೆಗೆ ಬರುವಾಗ ಹೊಸ ರಹದಾರಿ ಕೋರಿರುವ ಅರ್ಜಿದಾರರು ಮೀನುಗಾರಿಕಾ ದೋಣಿ ಮತ್ತು ಇಂಜಿನ್ ಸಹಿತ ಮೀನುಗಾರಿಕಾ ಇಲಾಖಾ ನೋಂದಣಿ ಪತ್ರ, ಇಂಜಿನ್ ಬಿಲ್ಲು, ದೋಣಿ ಬಿಲ್ಲುಗಳ ಮೂಲಪ್ರತಿಗಳನ್ನು ಮತ್ತು ಅರ್ಜಿದಾರರ ಆಧಾರ್ ಕಾರ್ಡ್, ಪಡಿತರ ಚೀಟಿ ಜೆರಾಕ್ಸ್ ಪ್ರತಿ, ದೋಣಿ ಮಾಲಕರ ಬ್ಯಾಂಕ್ ಪುಸ್ತಕದ ಮುಖ್ಯ ಪುಟ ಜೆರಾಕ್ಸ್ ಪ್ರತಿಯೊಂದಿಗೆ ಮತ್ತು ಎರಡು ಪ್ರತಿ ಭಾವಚಿತ್ರಗಳನು್ನ ಪರಿಶೀಲನೆಗೆ ಹಾಜರುಪಡಿಸಬೇಕು.
ನವೀಕರಣ ಕೋರಿರುವ ರಹದಾರಿದಾರರು ಮೀನುಗಾರಿಕಾ ಇಲಾಖಾ ನೋಂದಣಿ ಪತ್ರದ ಪ್ರತಿ ಮತ್ತು ಸೀಮೆಎಣ್ಣೆ ರಹದಾರಿ ಪ್ರತಿಯನ್ನು ಪರಿಶೀಲನೆಗೆ ಹಾಜರುಪಡಿಸಬೇಕು. ತಪಾಸಣಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.