ಬೈಂದೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರು ಕಳವು
ಬೈಂದೂರು, ಆ.3: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಮನೆಗಳ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ನಾಲ್ಕು ಜಾನುವಾರುಗಳು ಕಳವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಜು.26ರಂದು ರಾತ್ರಿ ವೇಳೆ ಶಿರೂರು ಗ್ರಾಮದ ಸಾತೋಡಿಯ ಸುಬ್ಬಣ್ಣ ಶೆಟ್ಟಿ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 10ಸಾವಿರ ರೂ. ಮೌಲ್ಯದ ಒಂದು ದನವನ್ನು, ಜು.29ರಂದು ರಾತ್ರಿ ಪಡುವರಿ ಗ್ರಾಮದ ಜೋಗೂರು ಎಂಬಲ್ಲಿ ಗಿರಿಜಮ್ಮ ಶೆಡ್ತಿ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 35,000 ರೂ. ಮೌಲ್ಯದ ಒಂದು ದನ ಹಾಗೂ ಎರಡು ಎತ್ತಿನ ಗುಡ್ಡವನ್ನು ಮತ್ತು ಜು.26ರಂದು ರಾತ್ರಿ ವೇಳೆ ಜೋಗೂರಿನ ಶಾಂತರಾಮ ಎಂಬ ವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 40 ಸಾವಿರ ರೂ. ಮೌಲ್ಯದ ಒಂದು ಜೊತೆ ಎತ್ತನ್ನು ಕಳವು ಮಾಡಲಾಗಿದೆ ಎಂದು ದೂರಿ ನಲ್ಲಿ ತಿಳಿಸಲಾಗಿದೆ.
Next Story