ನಿಸ್ವಾರ್ಥ ಸೇವೆಗೆ ಪ್ರತಿಫಲ ಇದ್ದೇ ಇರುತ್ತದೆ :ಫಾದರ್ ಆಲ್ವಿನ್ ಸೆರಾವೋ
ಮಂಗಳೂರು,ಆ.4: ವಿದ್ಯಾರ್ಥಿಗಳು ನಿಸ್ವಾರ್ಥದಿಂದ ಬೇರೆಯವರಿಗೆ ಸೇವೆ ಮಾಡಿದರೆ ಅದರ ಪ್ರತಿಫಲವು ಮಾಡಿದ ಸೇವೆಗಿಂತ ಹೆಚ್ಚಾಗಿರುತ್ತದೆ ಎಂದು ಪಾದುವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಆಲ್ವಿನ್ ಸೆರಾವೋ ಹೇಳಿದ್ದಾರೆ
ಪಾದುವ ಪದವಿ ಪೂರ್ವ ಕಾಲೇಜಿನ 2018-19 ನೇ ಸಾಲಿನ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾದುವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗ್ಲಾಡಿಸ್ ಅಲೋಶಿಯಸ್ ಅವರು ವಹಿಸಿದ್ದರು. ನಾವು ಮಾಡುವ ಸೇವೆ ಕೇವಲ ತೋರಿಕೆಯದ್ದಾಗಿರದೆ ಮನಪೂರ್ವಕವಾಗಿ ಯಾವುದೇ ಪ್ರತಿಫಲದ ಅಪೇಕ್ಷೆ ಯಿಲ್ಲದೆ ಮಾಡಿದಾಗ ಅದು ಸಾರ್ಥಕವಾಗಲು ಸಾಧ್ಯ ಎಂದು ಅವರು ಹೇಳಿದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾದುವ ಕಾಲೇಜಿನ ಉಪಪ್ರಾಂಶುಪಾಲ ರೋಷನ್ ಸಾಂತುಮಾಯೊರ್ ಅವರು ,ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯೋದ್ದೇಶಗಳನ್ನು ಸ್ವಯಂ ಸೇವಕರಿಗೆ ಸೋದಾಹರಣವಾಗಿ ವಿವರಿಸಿ ಮಾಹಿತಿ ನೀಡಿದರು.
ಪಾದುವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಘಟಕದ ಯೋಜನಾಧಿಕಾರಿ ಯತಿರಾಜ್ ಅವರು ಸ್ವಯಂ ಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಹ ಯೋಜನಾಧಿಕಾರಿಗಳಾದ ಅನಿಲ್ ಡಿ ಮೆಲ್ಲೋ ಅವರು ಸ್ವಾಗತಿಸಿದರೆ, ಕುಮಾರಿ ರಶ್ಮಿ ಪ್ರಿಯಾ ಅವರು ಧನ್ಯವಾದ ಸಮರ್ಪಿಸಿದರು. ಸ್ವಯಂ ಸೇವಕಿ ಬಿಯಾಂಕಾ ಸಾಲ್ಡಾನಾ ಅವರು ಕಾರ್ಯಕ್ರಮ ನಿರೂಪಿಸಿದರು .