ಕೊಳವೂರು: ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ
ಮಂಗಳೂರು, ಆ. 4 : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪೂರಕವಾಗಿದ್ದು ಇಂತಹ ಕಾರ್ಯಗಳಿಗೆ ಹೆತ್ತವರು, ಶಿಕ್ಷಕರು ಹಾಗೂ ಸಮಾಜದ ಪ್ರೋತ್ಸಾಹ ಅತೀ ಅಗತ್ಯ ಎಂದು ಕೊಳವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅದ್ಯಕ್ಷ ಅಬ್ದುಲ್ ಲತೀಫ್ ಹೇಳಿದರು.
ಕೊಳವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಣ್ಣೋರಿ ಕ್ಲಸ್ಟರ್ ಮಟ್ಟದ 2018 - 19 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ತಾ. ಪಂ. ಸದಸ್ಯ ನಾಗೇಶ್ ಶೆಟ್ಟಿ ಉದ್ಘಾಟಿಸಿದರು. ಮುತ್ತೂರು ಗ್ರಾ. ಪಂ. ಅಧ್ಯಕ್ಷೆ ನಾಗಮ್ಮ, ಸದಸ್ಯರಾದ ಜಗದೀಶ್, ಪ್ರವೀಣ್ ಆಳ್ವ, ಮಾಜಿ ಸದಸ್ಯ ಹರಿಯಪ್ಪ, ಬಿ.ಆರ್.ಸಿ.ಶೀಲಾವತಿ, ಬಿ.ಐ.ಆರ್.ಟಿ. ಸವಿತಾ ಡಿಸೋಜ, ಅಣ್ಣಿ ಶೆಟ್ಟಿ, ಎಸ್.ಡಿ.ಎಂ.ಸಿ.ಸದಸ್ಯ ಗೋಪಾಲ, ಮುತ್ತೂರು ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸಿಫ್ರಿಯನ್ ಡಿಸೋಜ, ಮಂಗಳೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ಯತಿರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಕಣ್ಣೋರಿ ಕ್ಲಸ್ಟರ್ ವ್ಯಾಪ್ತಿಯ 14 ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಸ್ಪರ್ಧೆ ನಡೆಯಿತು. ಕಣ್ಣೋರಿ ಸಿ.ಆರ್.ಪಿ. ಪುಷ್ಪಾವತಿ ಪ್ರಸ್ತಾವಿಸಿ, ಕೊಳವೂರು ಶಾಲಾ ಮುಖ್ಯ ಶಿಕ್ಷಕಿ ಉಮಾವತಿ ಸ್ವಾಗತಿಸಿದರು. ಸಹ ಶಿಕ್ಷಕರಾದ ಶಾಂತಿ ಡಿಸೋಜ ವಂದಿಸಿ, ಜಯಲಕ್ಷ್ಮಿ ನಿರೂಪಿಸಿದರು.