ಉಡುಪಿಯಲ್ಲಿ ಬೂದಿ ಮಿಶ್ರಿತ ಮಳೆ: ಕೇಂದ್ರ ಪರಿಸರ ಇಲಾಖೆಗೆ ಸಾರ್ವಜನಿಕರ ದೂರು ಅರ್ಜಿ
ಉಡುಪಿ, ಆ.4: ಉಡುಪಿ ನಗರ ಹಾಗೂ ಜಿಲ್ಲೆಯ ಅನೇಕ ಕಡೆಗಳಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಸುರಿದ ಬೂದಿ ಮಿಶ್ರಿತ ಅಸಹಜ ಮಳೆ ಮುಂಬರುವ ದಿನಗಳ ಅಪಾಯದ ಮುನ್ಸೂಚನೆಯಾಗಿ ಹಲವರಿಗೆ ಕಂಡಿದ್ದು, ಈ ಕುರಿತಂತೆ ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆಗೆ ಲಿಖಿತ ದೂರೊಂದನ್ನು ಈಮೇಲ್ ಮೂಲಕ ಕಳುಹಿಸಲಾಗಿದೆ.
ಇದರ ಜೊತೆಜೊತೆಗೆ ಆನ್ಲೈನ್ನಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿ ಕೇಂದ್ರ ಪರಿಸರ ಇಲಾಖೆಗೂ ಸಾರ್ವಜನಿಕ ದೂರು ಅರ್ಜಿಯೊಂದನ್ನು ಪರಿಸರಾಸಕ್ತರು ಸಿದ್ಧಪಡಿಸಿದ್ದು ಅದನ್ನು ಕಳುಹಿಸಿಕೊಡುವ ಸಿದ್ಧತೆ ನಡೆಸಲಾಗಿದೆ. ಇದರಲ್ಲಿ ಈ ಮಳೆಗೆ ನಿಜವಾದ ಕಾರಣವನ್ನು ಪತ್ತೆ ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದು, ಪರಿಸರಾಸಕ್ತ 9 0ಕ್ಕೂ ಅಧಿಕ ಮಂದಿ ಈಗಾಗಲೇ ಈ ಅರ್ಜಿಗೆ ಸಹಿಯನ್ನೂ ಮಾಡಿದ್ದಾರೆ.
ಅರ್ಜಿಯ ವಿವರ: ಶುಕ್ರವಾರ ಸಂಜೆ ಸುರಿದ ಅಸಹಜ ಮಳೆಯಿಂದ ನಗರದೊಳಗೆ ನಿಲ್ಲಿಸಿದ ವಾಹನಗಳು, ಗಿಡಮರಗಳ ಮೇಲೆಲ್ಲಾ ಬಿಳಿಹುಡಿಯಂಥ ವಸ್ತು ಸಂಗ್ರಹವಾಗಿದ್ದು, ಇದು ರುಚಿಯಲ್ಲಿ ಉಪ್ಪಾಗಿದ್ದು, ಕಟುವಾದ ವಾಸನೆಯನ್ನು ಹೊಂದಿತ್ತು. ಶನಿವಾರದ ಪತ್ರಿಕೆಗಳು ಈ ವಸ್ತು ನಂದಿಕೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಬೀಳುವ ಹಾರುಬೂದಿಯಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಜನರಿಂದ ದೂರು ಬಂದರೆ ಮಾತ್ರ ನಾವು ಮಳೆ ನೀರು ಹಾಗೂ ವಸ್ತುವಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸು ವುದಾಗಿ ಸ್ಥಳೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪತ್ರಿಕೆಗಳಿಗೆ ತಿಳಿಸಿರುವುದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಅವರಿಗೆ ಮಾಹಿತಿ ಸಿಕ್ಕಿದಾಕ್ಷಣ ವಾಹನಗಳ ಮೇಲಿದ್ದ ವಸ್ತುಗಳ ಸ್ಯಾಂಪಲ್ನ್ನು ಸಂಗ್ರಹಿಸಬೇಕಾಗಿತ್ತು. ಮಳೆ ನೀರು ಹಾಗೂ ಅದರೊಂದಿಗೆ ಬಂದ ವಸ್ತು, ಅಧಿಕಾರಿಗಳು ಬರುವ ತನಕ ಕಾಯುವುದಿಲ್ಲ. ಈವರೆಗೆ ಅಧಿಕಾರಿಗಳು ಇದರ ಸ್ಯಾಂಪಲ್ ಸಂಗ್ರಹಿಸದೇ ಇದ್ದರೆ ಈ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತೇವೆ.
ತಾವು ಮಾಲಿನ್ಯಕಾರವಾದ ಯಾವುದೇ ವಸ್ತುಗಳನ್ನು ಪರಿಸರಕ್ಕೆ ಬಿಡುತ್ತಿಲ್ಲ ಎಂದು ಯುಪಿಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಹೇಳಿರುವುದು ನಿಜವಲ್ಲ. ಕಂಪೆನಿಯೇ ನಿಮಗೆ (ಕೇಂದ್ರ ಪರಿಸರ ಇಲಾಖೆ) ನೀಡಿರುವ ವರದಿಯಲ್ಲಿ ಅನುಮತಿ ಇರುವ ಮಟ್ಟದ ಹಾರುಬೂದಿಯನ್ನು ನಾವು ಪರಿಸರಕ್ಕೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕ್ಷಣಕ್ಕೆ ಅವರು ತೋರಿಸುತ್ತಿರುವ ಯುಪಿಸಿಎಲ್ ಸ್ಥಾವರದ ಪರಿಸರ ಪ್ಯಾರಾಮೀಟರ್ಗಳು ಅವರ ವಾರ್ಷಿಕ ಸರಾಸರಿಗಿಂತ ತುಂಬಾ ಅಧಿಕ ಪ್ರಮಾಣದಲ್ಲಿ ಹಾರುಬೂದಿ ವಾತಾವರಣಕ್ಕೆ ಸೇರುತ್ತಿರುವುದನ್ನು ವಿವರಿಸುತ್ತಿವೆ. ತಾವು ಮಾಲಿನ್ಯಕಾರವಾದ ಯಾವುದೇ ವಸ್ತುಗಳನ್ನು ಪರಿಸರಕ್ಕೆ ಬಿಡುತ್ತಿಲ್ಲ ಎಂದು ಯುಪಿಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಆದರೆ ಅವರು ಹೇಳಿರುವುದು ನಿಜವಲ್ಲ. ಕಂಪೆನಿಯೇ ನಿಮಗೆ (ಕೇಂದ್ರ ಪರಿಸರ ಇಲಾಖೆ) ನೀಡಿರುವ ವರದಿಯಲ್ಲಿ ಅನುಮತಿ ಇರುವ ಮಟ್ಟದ ಹಾರುಬೂದಿಯನ್ನು ನಾವು ಪರಿಸರಕ್ಕೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕ್ಷಣಕ್ಕೆ ಅವರು ತೋರಿಸುತ್ತಿರುವ ಯುಪಿಸಿಎಲ್ ಸ್ಥಾವರದ ಪರಿಸರ ಪ್ಯಾರಾಮೀಟರ್ಗಳು ಅವರ ವಾರ್ಷಿಕ ಸರಾಸರಿಗಿಂತ ತುಂಬಾ ಅಧಿಕ ಪ್ರಮಾಣದಲ್ಲಿ ಹಾರುಬೂದಿ ವಾತಾವರಣಕ್ಕೆ ಸೇರುತ್ತಿರುವುದನ್ನು ವಿವರಿಸುತ್ತಿವೆ. ಈ ಎಲ್ಲಾ ಕಾರಣಗಳಿಗಾಗಿ ಈ ಬಗ್ಗೆ ತಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಹಾಗೂ ಉಡುಪಿಯ ನಾಗರಿಕರಿಗೆ ಸುರಕ್ಷಿತ ಹಾಗೂ ಆರೋಗ್ಯಪೂರ್ಣ ಪರಿಸರದ ಭರವಸೆಯನ್ನು ನೀಡಬೇಕೆಂದು ಕೋರುತ್ತೇವೆ ಎಂದು ಕೇಂದ್ರ ಪರಿಸರ ಇಲಾಖೆಗೆ ಸಲ್ಲಿಸಲು ಸಿದ್ಜಪಡಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ.