ಮೊಬೈಲ್ ಕೊಡಿಸದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಕೋಟ, ಆ.4: ಮನೆಯವರು ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಕ್ಕುಂಜೆ ಎಂಬಲ್ಲಿ ಆ.3ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕಕ್ಕುಂಜೆ ಗ್ರಾಮದ ಮದಗದಮನೆಯ ಬಸವ ಕುಲಾಲ್ ಎಂಬ ವರ ಮಗ ಪ್ರತೀಕ್ಷ( 17) ಎಂದು ಗುರುತಿಸಲಾಗಿದೆ. ಬಿದ್ಕಲ್ಕಟ್ಟೆ ಕಾಲೇಜಿ ನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ ಪ್ರತೀಕ್ಷ್ ಮನೆಯವರು ತನಗೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣ ಮನೆಯ ಮಾಡಿನ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story