ಕೋಟೇಶ್ವರ: ‘ನಮ್ಮ ಮಕ್ಕಳು ನಮ್ಮವರಾಗಲು’ ಜಾಗೃತಿ ಅಭಿಯಾನ
ಕುಂದಾಪುರ, ಆ.5: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯಾದಂತಹ ಹಮ್ಮಿಕೊಂಡಿರುವ ‘ನಮ್ಮ ಮಕ್ಕಳು ನಮ್ಮವರಾಗಲು’ ಎಂಬ ಜಾಗೃತಿ ಅಭಿಯಾನವು ರವಿವಾರ ಕೋಟೇಶ್ವರ ಸೆಕ್ಟರ್ ವತಿಯಿಂದ ಜರಗಿತು.
ಹಂಗಳೂರು ಜುಮಾ ಮಸೀದಿಯ ಎದುರು ಅಸೈಯ್ಯದ್ ಜಅ್ಫರ್ ಕೋಟೇಶ್ವರ ತಂಙಳ್ ದುಆದೊಂದಿಗೆ ಜಾಥಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥವು ಕುಂದಾಪುರ ಶಾಸ್ತ್ರೀ ಪಾರ್ಕ್ ಮುಂಭಾಗದಲ್ಲಿ ಸಮಾಪನ ಗೊಂಡಿತು. ಸಮಾರೋಪವನ್ನು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ಉದ್ಘಾಟಿಸಿದರು. ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ಅಂಜದಿ ಮುಖ್ಯ ಭಾಷಣ ಮಾಡಿದರು.
ರಾಜ್ಯ ನಾಯಕ ರವೂಫ್ ಖಾನ್, ಡಿವಿಷನ್ ಅಧ್ಯಕ್ಷ ಮುಸ್ತಫಾ ಸಅದಿ, ಡಿವಿಷನ್ ಕಾರ್ಯದರ್ಶಿ ಶಮೀರ್, ಕೋಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ, ಹುಸೈನ್ ಪಡುಕೆರೆ, ನಾಸಿರ್ ಉಪಸ್ಥಿತಿಸಿದರು. ಸೆಕ್ಟರ್ ಅಧ್ಯಕ್ಷ ಸಿದ್ದೀಖ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಹೀಂ ಮೂಡು ಗೋಪಾಡಿ, ಸಲ್ಮಾನ್ ಪಡುಕೆರೆ, ಅಫ್ತಾಬ್ ಪಡುಕೆರೆ ಬೀದಿ ಬಾಷಣ ಹಾಗು ಅಭಿಯಾನ ಹಾಡು ಹಾಡಿದರು.