ಬೆಳ್ತಂಗಡಿ: ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿ ಸೆರೆ
ಬೆಳ್ತಂಗಡಿ, ಆ. 5: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಮಾನವೀಯ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ವೇಣೂರು ಪೋಲಿಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕಿ ಒಂಭತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಧ್ಯದಲ್ಲೇ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾಳೆ. ಬಾಲಕಿಗೆ ಪರಿಚಿತನಾದ ನೆರೆಯ ಕಾಶಿಪಟ್ಣ ಗ್ರಾಮದ ಓಲ್ಪಾಡಿ ನಿವಾಸಿ ಸತೀಶ್ ಯಾನೆ ಶಶಿ (21) ಅತ್ಯಾಚಾರವೆಸಗಿದ ಆರೋಪಿಯಾಗಿದ್ದು ಈತನನ್ನು ವೇಣೂರು ಪೋಲಿಸರು ಬಂಧಿಸಿದ್ದಾರೆ.
ಬಾಲಕಿಯು ತನ್ನ ಕಾಶಿಪಟ್ಣದ ಅಜ್ಜಿ ಮನೆಗೆ ಹೋದ ಸಂದರ್ಭ ಪರಿಚಿತನಾದ ಆರೋಪಿ ಬಾಲಕಿ ಸ್ನೇಹಬೆಳೆಸಿದ್ದನು. ಬಳಿಕ ದೂರವಾಣಿ ಮೂಲಕ ಸಂಪರ್ಕ ಮುಂದುವರಿಸುತ್ತಿದ್ದನು. ಕಳೆದ ಜನವರಿಯಲ್ಲಿ ಬಾಲಕಿಯ ಮನೆಯ ಸನಿಹದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿಸಿ ಗರ್ಭಿಣಿಯಾಗಿಸಿದ್ದಾನೆ. ಆದರೆ ಬಾಲಕಿಯು ಮಾತ್ರ ಇದನ್ನು ಯಾರಿಗೂ ಹೇಳಿರಲಿಲ್ಲ.
ಈ ಮಧ್ಯೆ ಕೆಲ ದೃಶ್ಯಮಾಧ್ಯಮಗಳಲ್ಲಿ ತಂದೆಯೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾಗಿ ಸುದ್ದಿ ಪ್ರಸಾರಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.