ಇಸ್ಪೀಟು ಜುಗಾರಿ: ಏಳು ಮಂದಿ ಬಂಧನ
ಕಾರ್ಕಳ, ಆ.6: ಕಾಬೆಟ್ಟು ಕಟ್ಟೆಮಾರು ಬಳಿ ಆ.5ರೊದು ಸಂಜೆ 7.45ರ ಸುಮಾರಿಗೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಗುರುವಾಯನಕೆರೆಯ ಉಸ್ಮಾನ್(40), ಕುಕ್ಕುಂದೂರಿನ ಪ್ರತಾಪ್(26), ನಿಟ್ಟೆಯ ರವಿ(32), ಜೋಡುಕಟ್ಟೆಯ ಸಂದೀಪ್(31), ಬಂಟ್ವಾಳದ ತೌಸಿಫ್ (24), ಬೈಲೂರಿನ ಸುಜಯ್ ಸಾಲಿಯಾನ್(41), ಕಾರ್ಕಳದ ಹರಿಯಪ್ಪ (44) ಬಂಧಿತ ಆರೋಪಿಗಳು.
ಇವರಿಂದ 30,280ರೂ. ನಗದು, 8,70,000ರೂ. ಮೌಲ್ಯದ 12 ಬೈಕ್ ಹಾಗೂ 23,500ರೂ. ಮೌಲ್ಯದ 13 ಮೊಬೈಲ್ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಕೆಲವು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಓರ್ವ ಆರೋಪಿಯನ್ನು ಬೆನ್ನಟ್ಟಿ ಹಿಡಿಯಲು ಹೋದ ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story