ನೆರಿಯಗ್ರಾಮದ ಬಾಂಜಾರುಮಲೆ ಮಲೆಕುಡಿಯ ಕಾಲನಿಗೆ ಸೋಮವಾರ ತಹಸೀಲ್ದಾರ್ ಭೇಟಿ
ಬೆಳ್ತಂಗಡಿ,ಆ.6 : ನೆರಿಯಗ್ರಾಮದ ಬಾಂಜಾರುಮಲೆ ಮಲೆಕುಡಿಯ ಕಾಲನಿಗೆ ಸೋಮವಾರ ತಹಸೀಲ್ದಾರ್ ಮದನ್ ಮೋಹನ್ ನೇತೃತ್ವದ ತಂಡ ಬಾಂಜಾರು ಮಲೆಗೆ ಭೇಟಿ ನೀಡಿ ಮಲೆಕುಡಿಯ ಸಮುದಾಯದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮದನ್ ಮೋಹನ್ ಮಾತನಾಡಿ, ತಾಲೂಕು ತಹಶಿಲ್ದಾರ್ ಆಗಿ ಇಲ್ಲಿಗೆ ಭೇಟಿ ನೀಡಿದ್ದೇನೆ, ಇಲ್ಲಿ ಕಂದಾಯ ಇಲಾಖೆ ಸಮಸ್ಯೆಗಳಿಗಿಂತ ಇತರ ಇಲಾಖೆ ಸಮಸ್ಯೆಗಳೆ ಹೆಚ್ಚು, ಅದಕ್ಕೆ ಸಂಬಂದಿಸಿದ ಇಲಾಖೆಗಳಿಗೆ ಪತ್ರ ವ್ಯವಹಾರದ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸುವುದಾಗಿ ತಿಳಿಸಿದರು. ಐಟಿಡಿಪಿ, ಸಮಾಜಕಲ್ಯಾಣ, ಪಂಚಾಯತ್ರಾಜ್ ಇಂಜಿನಿಯರಿಂಗ್ ಇಲಾಖೆ, ಮೆಸ್ಕಾಂ ಇಲಾಖೆಗೆ ಸಂಬಂದಿಸಿದ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಭರವಸೆ ನೀಡಿದರು.
ಬೆಳ್ತಂಗಡಿ ಕಂದಾಯ ನಿರೀಕ್ಷಕರವಿ ಕುಮಾರ್, ನೆರಿಯ ಗ್ರಾಮಕರಣಿಕ ಸತೀಶ್, ಪ್ರಥಮದರ್ಜೆ ಸಹಾಯಕ ಶಂಕರ್ಜೊತೆಗದಿದ್ದು. ಬಾಂಜಾರು ಸಮುದಾಯ ಭವನದಲ್ಲಿ ಸಭೆ ನಡೆಯಿತು. ನೆರಿಯಗ್ರಾ.ಪಂ ಸದಸ್ಯೆ ಮೀನಾಕ್ಷಿ ಬಾಂಜಾರುರವರ ನೇತೃತ್ವದಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಲ್ಲದೆ ಮನವಿ ನೀಡಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ವಿನಂತಿಸಿದರು.
2ಕೋಟಿ ರಸ್ತೆಕಾಂಕ್ರೀಟೀಕರಣ ಮಂಜೂರುಗೊಂಡು ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭಿಸದ ಬಗ್ಗೆ ಸ್ಥಳೀಯರು ತಮ್ಮಅಸಮದಾನ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ನೀಡಿದ ಭರವಸೆ ಈಡೇರಿಸಿಲ್ಲ. ಆದಿವಾಸಿ ಜನಾಂಗದ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣವಿದ್ದರೂ ಅಭಿವೃದ್ಧಿಯಾಗುವುದಿಲ್ಲ. ನಮಗೆ ಕೇವಲ ಭರವಸೆ ಬೇಡ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ ಎಂದು ಜನರು ತಹಶಿಲ್ದಾರ್ ಮುಂದೆ ಹೇಳಿದರು. ಎಲ್ಲಾ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದಾಗಿ ಹೇಳಿದ ಅವರು ಕಂದಾಯ ಇಲಾಖೆಗೆ ಸಂಬಂದಿಸಿದ ಸಮಸ್ಯೆಗಳ ಬಗ್ಗೆ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದರು.
ಕಳೆದ ವಾರ ಬೆಳ್ತಂಗಡಿಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಬಾಂಜಾರು ಮಲೆಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇಲಾಖೆಗಳ ಗಮನ ಸೆಳೆಯಲಾಗಿತ್ತು. ತಹಶೀಲ್ದಾರ್ ಅವರು ತಾನು ಅಲ್ಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶಸೀಲಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಅವರು ಬಾಂಜಾರು ಮಲೆಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ.