ಮಂಗಳೂರು: ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಮರವನ್ನು ಬೇರೆಡೆ ಸ್ಥಳಾಂತರ!
ಮಂಗಳೂರು, ಆ.7: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಲೇಡಿಹಿಲ್ ಬಳಿ ಚಿಲಿಂಬಿಗೆ ತಿರುಗುವ ರಸ್ತೆಯಲ್ಲಿದ್ದ ಮರವೊಂದನ್ನು ಬುಡಸಮೇತ ಸ್ಥಳಾಂತರಗೊಳಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಲೇಡಿಹಿಲ್ ಬಳಿ ಚಿಲಿಂಬಿಗೆ ತಿರುಗುವ ರಸ್ತೆಯಲ್ಲಿದ್ದ ಹುಣಸೆ ಮರವನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತ್ತು. ಆದರೆ ಇದಕ್ಕೆ ಪರಿಸರ ಪರ ಸಂಘಟನೆಯಾದ ಎನ್.ಇ.ಸಿ.ಎಫ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಮರ ಕಡಿಯುವ ನಿರ್ಧಾರವನ್ನು ಕೈಬಿಟ್ಟು ಅದನ್ನು ಬುಡಸಮೇತ ಇನ್ನೊಂದೆಡೆಗೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಅದರಂತೆ ಇಂದು ಬೆಳಗ್ಗೆ ಈ ಹುಣಸೆ ಮರ ಕೊಂಬೆಗಳನ್ನು ಕಡಿದು ಬಳಿಕ ಕ್ರೇನ್ ಸಹಾಯದಿಂದ ಬುಡಸಮೇತ ಕೀಳಲಾಯಿತು. ಬಳಿಕ ಮರವನ್ನು ಕ್ರೇನ್ ಮೂಲಕವೇ ಪಕ್ಕದ ಖಾಲಿ ಜಾಗಕ್ಕೆ ಕೊಂಡೊಯ್ದು ನೆಡಲಾಯಿತು.
ಈ ಮೂಲಕ ಬೃಹತ್ ಮರವೊಂದನ್ನು ಉಳಿಸಿದ ಅಪರೂಪದ ಘಟನೆ ನಡೆಯಿತು.
Next Story