ಸಾರಿಗೆ ಕಾರ್ಮಿಕರ ಮುಷ್ಕರ: ಉಡುಪಿಯಲ್ಲಿ ಚಾಲಕರಿಂದ ಧರಣಿ
ಉಡುಪಿ, ಆ.7: ಮೋಟಾರು ವಾಹನ(ತಿದ್ದುಪಡಿ) ಮಸೂದೆ ಹಿಂಪಡೆ ಯುವಂತೆ ಆಗ್ರಹಿಸಿ ಕರೆ ನೀಡಿರುವ ರಾಷ್ಟ್ರವ್ಯಾಪಿ ಸಾರಿಗೆ ಕಾರ್ಮಿಕರ ಮುಷ್ಕರದ ಪ್ರಯುಕ್ತ ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ ಉಡುಪಿ ಹಾಗೂ ಕುಂದಾಪುರ ತಾಲೂಕು(ಸಿಐಟಿಯು) ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಈ ತಿದ್ದುಪಡಿ ಮಸೂದೆಯಿಂದ ವಾಹನ ಮಾಲಕರು ಹಾಗೂ ಕಾರ್ಮಿಕ ರನ್ನು ನಾಶ ಮಾಡಿ, ಇಡೀ ಉದ್ದಿಮೆಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸಲು ಸರಕಾರ ಹೊರಟಿದೆ. ಈ ಮಸೂದೆಯ ಪರಿಣಾಮವಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವಾಗಲಿದೆ ಎಂದು ಆರೋಪಿಸಿದರು.
ಅಪಘಾತಗಳಿಗೆ ಚಾಲಕರು ಹಾಗೂ ನಿರ್ವಾಹಕರನ್ನೇ ಹೊಣೆ ಮಾಡಲಾಗು ತ್ತದೆ. ಅಪಘಾತಗಳಿಗೆ ಕಾರಣವಾಗಿರುವ ನಮ್ಮ ಸಂಚಾರಿ ವ್ಯವಸ್ಥೆ ಹಾಗೂ ರಸ್ತೆ ಸ್ಥಿತಿಗತಿಗಳ ಬಗ್ಗೆ ಈ ಮಸೂದೆಯಲ್ಲಿ ಉಲ್ಲೇಖವೇ ಇಲ್ಲದಿರುವುದು ದುರಂತ. ಆದುದರಿಂದ ಸರಕಾರ ಈ ಮಸೂದೆಯನ್ನು ವಾಪಾಸು ಪಡೆಯ ಬೇಕು ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯಿದೆ ಜಾರಿ ಗೊಳಿಸೇಕು ಎಂದು ಅವರು ಆಗ್ರಹಿಸಿದರು.
ಉಡುಪಿ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಸದಾಶಿವ ಪೂಜಾರಿ ಮಾತನಾಡಿ, ಕೇಂದ್ರ ಸರಕಾರ ಈ ಮಸೂದೆ ಮೂಲಕ ಚಾಲಕರ ಜೀವನವನ್ನೇ ಬಲಿ ತೆಗೆದುಕೊಳ್ಳಲು ಹೊರಟಿದೆ. ಇದು ಚಾಲಕರ ವರ್ಗಕ್ಕೆ ಮರಣ ಶಾಸನವಾಗಿದೆ. ಖಾಸಗೀಕರಣಕ್ಕೆ ಒತ್ತು ನೀಡುವ ಹುನ್ನಾರ ಈ ಮಸೂದೆಯ ಹಿಂದೆ ಇದೆ. ಇಡೀ ಸರಕಾರಿ ವ್ಯವಸ್ಥೆಯನ್ನೇ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು. ಕುಂದಾಪುರ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಬರೆಕಟ್ಟು, ಕಾರ್ಯದರ್ಶಿ ರಾಜು ದೇವಾಡಿಗ, ಉಡುಪಿ ತಾಲೂಕು ಅಧ್ಯಕ್ಷ ಉದಯ ಕುಮಾರ್, ಕಾರ್ಯದರ್ಶಿ ರತ್ನಾಕರ್, ಮುಖಂಡರಾದ ವಿ.ಚಂದ್ರ, ರಮೇಶ್, ನರಸಿಂಹ, ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು.
ಸಾರಿಗೆ ಕಾರ್ಮಿಕರ ಬೇಡಿಕೆಗಳು
ಮೋಟಾರು ವಾಹನ(ತಿದ್ದುಪಡಿ) ಮಸೂದೆ 2017ನ್ನು ವಾಪಾಸು ಪಡೆಯ ಬೇಕು. ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯಿದೆ ಜಾರಿಗೆ ತರಬೇಕು. ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಬಜೆಟ್ ನೆರವಿನ ಮೂಲಕ ರಕ್ಷಿಸಬೇಕು. ರಸ್ತೆ ಸಾರಿಗೆಗೆ ಸಂಬಂಧಿಸಿ ರಾಜ್ಯ ಸರಕಾರಗ ಹಕ್ಕು ಗಳನ್ನು ರಕ್ಷಿಸಬೇಕು.
ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಮತ್ತು ರಾಜ್ಯ ಸರಕಾರ ಗಳಿಗೆ ಆಗುತ್ತಿರುವ ನಷ್ಟವನ್ನು ತುಂಬಬೇಕು. ವಿಪರೀತ ದಂಡ ಮತ್ತು ಶಿಕ್ಷೆಗಳನ್ನು ಕಡಿತಗೊಳಿಸಬೇಕು. ವಿಮಾ ಪ್ರೀಮಿಯಂ ಮೊತ್ತವನ್ನು ಕಡಿತ ಗೊಳಿಸಬೇಕು. ಎಲ್ಲ ರೀತಿಯ ಚಾಲಕರನ್ನೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸ ಬೇಕು. ಸರಿಯಾದ ರಾಷ್ಟ್ರೀಯ ಸಾರಿಗೆ ನೀತಿಯನ್ನು ಜಾರಿಗೆ ತರಬೇಕು.