ಕುಂದಾಪುರ: ಆ.9ರಂದು ಉದಯ ಕಿಚನೆಕ್ಸ್ಟ್ ಮಳಿಗೆ ಉದ್ಘಾಟನೆ
ಉಡುಪಿ, ಆ.7: ಕರಾವಳಿ ಜಿಲ್ಲೆಗಳಲ್ಲಿ ಗೃಹೋಪಕರಣ ಸಾಮಗ್ರಿಗಳಿಗೆ ಖ್ಯಾತವಾದ ಉದಯ ಸಮೂಹ ಸಂಸ್ಥೆಯ 10ನೇ ರಿಟೇಲ್ ಮಳಿಗೆ ‘ಉದಯ ಕಿಚನೆಕ್ಸ್ಟ್’ ಆ. 9ರಂದು ಕುಂದಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಉದಯ ಸಮೂಹದ ಮಹಾಪ್ರಬಂಧಕ ಉಮೇಶ್ ಬಾಧ್ಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಉಡುಪಿ, ಮಣಿಪಾಲ, ಮಂಗಳೂರು, ಕುಮಟಾ, ಬ್ರಹ್ಮಾವರ, ಕಾಪು, ಕಾರ್ಕಳ, ಪಡುಬಿದ್ರಿ ಹಾಗೂ ಮೂಡಬಿದ್ರೆಗಳಲ್ಲಿ ಕಾರ್ಯಾಚರಿಸುತ್ತಿ ರುವ ಉದಯ ಕಿಚನೆಕ್ಟ್ಸ್ನ ಕುಂದಾಪುರ ಮಳಿಗೆಯನ್ನು ವಿಧಾನ ಪರಿಷತ್ನ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಆ.9ರ ಗುರುವಾರ ಬೆಳಗ್ಗೆ 10 ಕ್ಕೆ ಕುಂದಾಪುರ ಮುಖ್ಯ ರಸ್ತೆಯ ಶಂಕರ ಶೇಟ್ ಟವರ್ಸ್ನಲ್ಲಿ ಉದ್ಘಾಟಿಸಲಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ವಲಯ ಕಚೇರಿಯ ಜನರಲ್ ಮ್ಯಾನೇಜರ್ ಭಾಸ್ಕರ ಹಂದೆ ಅವರು ದೀಪ ಬೆಳಗಿಸಲಿದ್ದು, ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಎ.ಶೆಟ್ಟಿ, ಕಟ್ಟಡದ ಮಾಲಕಿ ಸುಂದರಿ ಎ.ಶೇಟ್ ಉಪಸ್ಥಿತರಿ ರುವರು ಎಂದರು.
ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅತೀ ಕಡಿಮೆ ಬೆಲೆಗೆ ನೀಡುವ ಮೂಲಕ ಗ್ರಾಹಕರ ವಿಶ್ವಾಸವನ್ನು ಸಂಪಾದಿಸಿರುವ ಉದಯ ಸಂಸ್ಥೆಯ ರೀಟೆಲ್ ಮಳಿಗೆಗಳು ದಿನಬಳಕೆಯ 75,000 ಕ್ಕೂ ಅಧಿಕ ಉತ್ಪನ್ನಗಳನ್ನು ಹೊಂದಿರುವ ಮೂಲಕ ಜನರ ಅಗತ್ಯಗಳಿಗೆ ‘ಒನ್ಸ್ಟಾಪ್’ ಮಳಿಗೆಗಳಾಗಿವೆ ಎಂದರು.
ಉದಯ ಸಮೂಹ ಸಂಸ್ಥೆಗಳಲ್ಲಿ 2007ರಿಂದ ಆಚರಿಸುತ್ತಿರುವ ‘ಉದಯ ಪರ್ಬ’ ಈ ಬಾರಿ ಆ.11ರಿಂದ 19ರವರೆಗೆ ನಡೆಯಲಿದ್ದು, ಕುಂದಾಪುರದಲ್ಲಿ ಇದು ಆ.9ರಿಂದಲೇ ಪ್ರಾರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ವಿವಿಧ ವಸ್ತುಗಳ ಮೇಲೆ ಶೇ.50ರಿಂದ 60ರಷ್ಟು ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದರು.
ಉದಯ ಕಿಚನೆಕ್ಟ್ಸ್ನ 11ನೇ ರೀಟೆಲ್ ಮಳಿಗೆ ಕಿನ್ನಿಗೋಳಿಯಲ್ಲಿ ಈ ತಿಂಗಳು ಉದ್ಘಾಟನೆಗೊಳ್ಳಲಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ 25 ಮಳಿಗೆಗಳನ್ನು ತೆರೆಯುವ ಗುರಿ ಸಂಸ್ಥೆಗಿದೆ ಎಂದು ಉಮೇಶ್ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅನುದೀಪ್, ಹರೀಶ್ ಉಪಸ್ಥಿತರಿದ್ದರು.