ಬಸ್ ಸಿಬ್ಬಂದಿಗಳಿಗೆ ಪರವಾನಿಗೆ ಕಡ್ಡಾಯ
ಉಡುಪಿ, ಆ.7: ಉಡುಪಿ ನಗರ ವ್ಯಾಪ್ತಿಯ ಅಂಬಾಗಿಲು- ಗುಂಡಿಬೈಲು ಕಲ್ಸಂಕ ಮಾರ್ಗವಾಗಿ ಬಸ್ಸುಗಳು ಸಂಚರಿಸದಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ವಿಶೇಷ ತನಿಖಾ ತಂಡವನ್ನು ನಿಯೋಜಿಸಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ.
ತಪಾಸಣೆ ಸಮಯದಲ್ಲಿ ಎಲ್ಲಾ ಬಸ್ಸು ಚಾಲಕರು/ ನಿರ್ವಾಹಕರು ಚಾಲ್ತಿ ಪರವಾನಗಿಯ ನಕಲು ಪ್ರತಿಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಹಾಗೂ ಅದನ್ನು ತಪಾಸಣಾ ಸಮಯದಲ್ಲಿ ತಪ್ಪದೇ ತೋರಿಸಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story