ಮಂಗಳೂರು ಫ್ರೆಂಡ್ಸ್ ಮಸ್ಕತ್ ಬದ್ರಿಯಾ ಸಮಿತಿ ಪದಾಧಿಕಾರಿಗಳ ಆಯ್ಕೆ
ಒಮಾನ್,ಆ.08: ಮಸ್ಕತ್ ನಲ್ಲಿ ಎಂಟು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಂಗಳೂರು ಫ್ರೆಂಡ್ಸ್ ಬದ್ರಿಯಾ ಸಮಿತಿಯ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಅಝೈಬ ಮಂಗಳೂರು ಸ್ವಲಾತ್ ರೂಮಿನಲ್ಲಿ ನಡೆಯಿತು.
ನಿಕಟಪೂರ್ವ ಗೌರವಾಧ್ಯಕ್ಷ ಹನೀಫ್ ಕೆ.ಎಸ್ ರವರು ಸಭೆಯನ್ನು ಉದ್ಘಾಟಿಸಿ, ಸಮಿತಿಯು ನಡೆದು ಬಂದ ಹಾದಿಯ ಕುರಿತು ಹಾಗೂ ಸಮಿತಿಯಿಂದ ಬಡ ನಿರ್ಗತಿಕರಿಗೆ ಸಹಾಯ ಮಾಡಿ ಅವರ ಕಣ್ಣೊರೆಸಲು ಸಹಕರಿಸಿದ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು.
ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮುಹಮ್ಮದ್ ಕಿಲ್ಲೂರು, ಅಧ್ಯಕ್ಷರಾಗಿ ತಮೀಂ ಮಣಿಲ, ಪ್ರಧಾನ ಕಾರ್ಯದರ್ಶಿಯಾಗಿ ನಿಝಾರ್ ಝುಹ್ರಿ ಕನ್ಯಾನ, ಜೊತೆ ಕಾರ್ಯದರ್ಶಿಯಾಗಿ ಖಲಂದರ್ ಶಾಫಿ ಮುಲ್ಕಿ, ಕೋಶಾಧಿಕಾರಿಯಾಗಿ ನಝೀರ್ ಬಜ್ಪೆಯವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾಗಿ ಯಾಕೂಬ್ ಕಬಕ, ಜಾಫರ್ ಕಲ್ಲಡ್ಕ, ಝುಬೈರ್ ಸಅದಿ, ಮೌಲಾನಾ ಶಾಕಿರ್ ಹೂಡೆ, ಉಸ್ತಾದ್ ಶಾಹಿದ್ ಹೂಡೆ, ಹಾರಿಸ್ ಹೂಡೆ, ಹನೀಫ್ ಕೆ.ಎಸ್ ಕಲ್ಲಡ್ಕ, ರಿಝ್ವಾನ್ ಕಬಕ, ರಿಯಾಝ್ ಬಜೆಗೋಳಿ, ಹನೀಫ್ ಬಾಸ್ ಕಲ್ಲಡ್ಕ, ಸಿದ್ದೀಕ್ ಕಡಂಬಾರ್ ರವರನ್ನು ಆಯ್ಕೆ ಮಾಡಲಾಯಿತು.
ಝುಬೈರ್ ಸಅದಿ ಪಾಟ್ರಕೋಡಿ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಕಾರ್ಯದರ್ಶಿ ಸ್ವಾಗತಿಸಿ, ಸಮಿತಿಯ ನೂತನ ಕಾರ್ಯದರ್ಶಿ ಧನ್ಯವಾದ ಅರ್ಪಿಸಿದರು.