ಸಜೀಪಮುನ್ನೂರು: ಸ್ವಚ್ಛತಾ ಅರಿವು ಜಾಥಾ ಕಾರ್ಯಕ್ರಮ
ಬಂಟ್ವಾಳ, ಆ. 8: ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮ ಪಂಚಾಯತ್ನಲ್ಲಿ ಸ್ವಚ್ಛತಾ ಅರಿವು ಜಾಥಾ ಕಾರ್ಯಕ್ರಮ ಬುಧವಾರ ನಡೆಯಿತು.
ತಾಪಂ ಸದಸ್ಯೆ ನಸೀಮಾ ಬೇಗಂ, ಗ್ರಾಪಂ ಅಧ್ಯಕ್ಷ ಶರೀಫ್ ನಂದಾವರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸದಸ್ಯರಾದ ಜನಾರ್ದನ, ಮಜೀದ್, ಹಂಝ, ಇದಿನಬ್ಬ, ನವೀನ್, ಸುಮತಿ.ಎಸ್, ನರೇಂದ್ರ ಆಳ್ವ, ಯೂಸುಫ್ ಕರಂದಾಡಿ, ವನಜ, ಪ್ರಮೀಳಾ, ದುಲ್ಸನ್ಪೆರಾವೋ, ಅಹ್ಮದ್ ಕಬೀರ್, ಪಂಚಾಯತ್ ಕಾರ್ಯದರ್ಶಿ ಶಿವಗೊಂಡಪ್ಪ, ಪಂಚಾಯತ್ ಸಿಬ್ಬಂದಿವರ್ಗ, ನಂದಾವರ ಶಾಲಾ ಶಿಕ್ಷಕರಾದ ಉದಯ, ದೇವದಾಸ, ಸರಸ್ವತಿ ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಊರಿನ ನಾಗರಿಕರು ಜಾಥಾದಲ್ಲಿ ಭಾಗವಹಿಸಿದರು.
Next Story